ಕಳಪೆ ರಸ್ತೆ: ಮುಂಬಯಿಯಲ್ಲಿ ರಸ್ತೆ ಅಗೆದು ಎಂಎನ್ಎಸ್ ಪ್ರತಿಭಟನೆ
Team Udayavani, Jul 17, 2018, 11:33 AM IST
ಮುಂಬಯಿ : ಮಹಾನಗರಿಯಲ್ಲಿನ ರಸ್ತೆ ಸ್ಥಿತಿಗತಿ ಅತ್ಯಂತ ಶೋಚನೀಯವಾಗಿರುವುದನ್ನು ಪ್ರತಿಭಟಿಸಲು ಬೀದಿಗಿಳಿದ ಎಂಎನ್ಎಸ್ ಕಾರ್ಯಕರ್ತರು ರಾಜ್ಯ ಸಚಿವಾಲಯಗಳ ಕಟ್ಟಡದ ಹೊರಗಿನ ಒಂದು ಬದಿಯ ರಸ್ತೆಯನ್ನು ಅಗೆದು ಆಡಳಿತೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಗೆಡಹಿದ್ದಾರೆ.
ದೇಶದ ವಾಣಿಜ್ಯ ರಾಜಧಾನಿ ಎನಿಸಿಕೊಂಡಿರುವ ಮುಂಬಯಿ ಮಹಾನಗರಿಯ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು ಈಚಿನ ಜಡಿಮಳೆ, ಕೃತಕ ನೆರೆ ರಸ್ತೆ ಪರಿಸ್ಥಿತಿಯನ್ನು ಶೋಚನೀಯಗೊಳಿಸಿದೆ.
ಇದನ್ನು ಪ್ರತಿಭಟಿಸಿಲು ನಿನ್ನೆ ರಾತ್ರಿ ಬೀದಿಗಿಳಿದು ಬಿಎಂಸಿ ವಿರುದ್ಧ ಘೋಷಣೆಗಳನ್ನು ಕೂಗಿದ ಎಂಎನ್ಎಸ್ ಕಾರ್ಯಕರ್ತರು ಮಂತ್ರಾಲಯದ ಹೊರಗಡೆಯ ಒಂದು ಬದಿಯ ರಸ್ತೆಯನ್ನು ಅಗೆಯಲು ಮುಂದಾದರು.
ಘಟನೆಗೆ ಸಂಬಂಧಿಸಿ ಕೂಡಲೇ ಕಾರ್ಯಾಚರಣೆಗಿಳಿದ ಸ್ಥಳೀಯ ಪೊಲೀಸರು ರಸ್ತೆ ವಿಧ್ವಂಸಕ ಕೃತ್ಯವನ್ನು ನಿಯಂತ್ರಿಸಿ ನಾಲ್ವರನ್ನು ಬಂಧಿಸಿದರು.
ಎಂಎನ್ಎಸ್ ನ ಸುಮಾರು 12 ಮಂದಿ ಕಾರ್ಯಕತರು ಬೀದಿಗಿಳಿದು ಪ್ರತಿಭಟನೆ ನಡೆಸಿದಾಗ ಒಬ್ಟಾತ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡಿದ್ದ. ಉಳಿದ 10 -12 ಮಂದಿ ರಸ್ತೆ ಅಗೆಯಲು ತೊಡಗಿ ಅವಶೇಷಗಳನ್ನು ಮುಖ್ಯ ರಸ್ತೆಗೆ ಎಸೆದು ವಾಹನಗಳು ಹೋಗದಂತೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ