ವರದಕ್ಷಿಣೆ ಕಿರುಕುಳದ ಸಂದೇಶ ಕಳುಹಿಸಿದ್ದ ಮಹಿಳೆ ಶವವಾಗಿ ಪತ್ತೆ!
Team Udayavani, Jun 24, 2021, 7:20 AM IST
ತಿರುವನಂತಪುರ: “ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಲಾಗುತ್ತಿದೆ’ ಎಂದು ತಮ್ಮ ಹೆತ್ತವರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದ ಕೇರಳದ 24 ವರ್ಷದ ಮಹಿಳೆ, ಬುಧವಾರ ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಘಟನೆ ಇಡೀ ಕೇರಳವನ್ನು ಆಘಾತಕ್ಕೆ ತಳ್ಳಿದೆ.
ಆಯುರ್ವೇದ ವೈದ್ಯ ಪದ್ಧತಿ ವ್ಯಾಸಂಗ ಮಾಡುತ್ತಿದ್ದ ವಿಸ್ಮಯಾ ನಾಯರ್, ವರದಕ್ಷಿಣೆಗಾಗಿ ಪತಿ ಕಿರಣ್ಕುಮಾರ್ ನನ್ನನ್ನು ಪೀಡಿಸುತ್ತಿದ್ದಾರೆ ಎಂದು ತಮ್ಮ ದೇಹದ ಗಾಯಗಳ ಫೋಟೋ ಸಮೇತ ತಮ್ಮ ಹೆತ್ತವರಿಗೆ ವಾಟ್ಸ್ಆ್ಯಪ್ ಸಂದೇಶ ರವಾನಿಸಿದ್ದರು.
ಬುಧವಾರ ಕೊಲ್ಲಂನ ಪತಿಯ ಮನೆಯ ಬಾತ್ರೂಂನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿಸ್ಮಯಾ ದೇಹ ಪತ್ತೆಯಾಗಿದೆ. ಕಳೆದ ವರ್ಷ ಜೂನ್ನಲ್ಲಿ ಇವರ ವಿವಾಹ ನೆರವೇರಿತ್ತು. ಆಗ 100 ಚಿನ್ನದ ನಾಣ್ಯ, ಒಂದು ಎಕರೆ ಜಮೀನು ಮತ್ತು 10 ಲಕ್ಷ ರೂ. ಮೌಲ್ಯದ ಕಾರನ್ನು ವರದಕ್ಷಿಣೆಯಾಗಿ ನೀಡಿದ್ದೆವು. ಆದರೂ ಇನ್ನಷ್ಟು ತರುವಂತೆ ಮಗಳಿಗೆ ಕಿರಣ್ ಪೀಡಿಸುತ್ತಿದ್ದ ಎಂದು ವಿಸ್ಮಯಾ ತಂದೆ ತ್ರಿವಿಕ್ರಮ್ ನಾಯರ್ ಆರೋಪಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ ವಿಜಯನ್, “ಬರ್ಬರ ಹಾಗೂ ಅಮಾನವೀಯ ವರದಕ್ಷಿಣೆ ಪಿಡುಗು ನಮ್ಮ ಹೆಣ್ಣುಮಕ್ಕಳನ್ನು ವ್ಯಾಪಾರದ ಸರಕಾಗಿಸಿದೆ. ದಯವಿಟ್ಟು ಅವರನ್ನು ಮನುಷ್ಯರಂತೆ ಕಾಣಿ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ