ರೈಲು ವಿಳಂಬವಾದರೆ ಅಧಿಕಾರಿಗಳಿಗೆ ಭಡ್ತಿ ಕಟ್
Team Udayavani, Jun 4, 2018, 7:22 AM IST
ಹೊಸದಿಲ್ಲಿ: ರೈಲು ವಿಳಂಬದಿಂದ ಬೇಸತ್ತ ಪ್ರಯಾಣಿಕರಿಗೊಂದು ಸಿಹಿ ಸುದ್ದಿ. ಇನ್ನು ರೈಲು ವಿಳಂಬವಾದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲು ರೈಲ್ವೇ ಇಲಾಖೆ ನಿರ್ಧರಿಸಿರುವುದರಿಂದ ರೈಲುಗಳು ಸಮಯಕ್ಕೆ ಸರಿಯಾಗಿ ಓಡುವ ನಿರೀಕ್ಷೆಯಿದೆ.
ಈ ಸಂಬಂಧ ಎಲ್ಲ ವಲಯ ರೈಲ್ವೇ ಮುಖ್ಯಸ್ಥರಿಗೆ ರೈಲ್ವೇ ಸಚಿವ ಪಿಯೂಶ್ ಗೋಯೆಲ್ ಸೂಚನೆ ನೀಡಿದ್ದು, ರೈಲು ವಿಳಂಬವಾದರೆ ಅಧಿಕಾರಿಗಳ ಭಡ್ತಿ ವಿಳಂಬವಾಗುತ್ತದೆ ಎಂದಿದ್ದಾರೆ. ಸುಧಾರಿಸಿಕೊಳ್ಳಲು ಅಧಿಕಾರಿಗಳಿಗೆ ಒಂದು ತಿಂಗಳ ಅವಕಾಶವನ್ನೂ ಅವರು ನೀಡಿದ್ದಾರೆ. ನಿರ್ವಹಣೆ ಹೆಸರಿನಲ್ಲಿ ರೈಲು ವಿಳಂಬ ಮಾಡುವಂತಿಲ್ಲ. ರೈಲು ವೇಳಾಪಟ್ಟಿಯಂತೆಯೇ ಚಲಿಸಬೇಕು ಎಂದು ವಲಯ ಮ್ಯಾನೇಜರ್ಗಳ ಸಭೆಯಲ್ಲಿ ಗೋಯೆಲ್ ಸೂಚಿಸಿದ್ದಾರೆ ಎನ್ನಲಾಗಿದೆ. 2017-18ರಲ್ಲಿ ಶೇ.30ರಷ್ಟು ರೈಲುಗಳು ವಿಳಂಬವಾಗಿ ಚಲಿಸಿವೆ. ಅದರಲ್ಲೂ ಉತ್ತರ ರೈಲ್ವೇ ವಲಯದಲ್ಲಿ ಶೇ.49.59ರಷ್ಟು ರೈಲುಗಳು ವಿಳಂಬವಾಗಿ ಸಂಚರಿಸಿವೆ. ಹೀಗಾಗಿ ಎಲ್ಲ ವಲಯದ ಪ್ರಧಾನ ವ್ಯವಸ್ಥಾಪಕರಿಗೂ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು