ಗುಜರಾತ್ನಲ್ಲಿ ತ್ರಿಕೋನ ಸ್ಪರ್ಧೆ!
Team Udayavani, Oct 27, 2017, 6:45 AM IST
ಅಹಮದಾಬಾದ್: ಗುಜರಾತ್ ಚುನಾವಣೆ ಈ ಬಾರಿ ಮೂವರು ಯುವರ ಮುಖಂಡರು ಮತ್ತು ಮೂರು ಪಕ್ಷಗಳ ಮಧ್ಯದ ಹೋರಾಟವಾಗಿ ಪರಿಣಮಿಸುವ ನಿರೀಕ್ಷೆಯಿದೆ. ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಯುವ ಮುಖಂಡರಿಗೆ ಮಣೆ ಹಾಕಿದ್ದರೆ, ಬಿಜೆಪಿ ವಿರೋಧಿ ಬಣದ ಮತಗಳನ್ನು ಒಡೆದು ಹಾಕಲು ಎಎಪಿ ಹಾಗೂ ಎನ್ಸಿಪಿ ಮತ್ತು ಜನ ವಿಕಲ್ಪ ಪಕ್ಷಗಳು ನೆರವಾಗಲಿವೆ ಎನ್ನಲಾಗಿದೆ.
ಕಾಂಗ್ರೆಸ್ನ ರಣತಂತ್ರದ ಪ್ರಮುಖ ಭಾಗವೇ ಮೂವರು ಯುವ ಮುಖಂಡರು. ಒಬಿಸಿ ಸಮುದಾಯದ ಅಲ್ಪೇಶ್ ಠಾಕೂರ್, ಇತ್ತೀಚೆಗಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಪಟೇಲರಿಗೆ ಮೀಸಲು ಬೇಡಿಕೆ ಹೋರಾಟದಿಂದ ಹೆಸರಾದ ಮುಖಂಡ ಹಾರ್ದಿಕ್ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಅಲ್ಲದೆ ದಲಿತ ಮುಖಂಡ ಜಿಗ್ನೇಶ್ ಮೇವಾನಿಯೂ ಪಕ್ಷ ಸೇರಲಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ತನ್ನ ಚುನಾವಣಾ ತಂತ್ರವನ್ನು ಮರುರೂಪಿಸುತ್ತಿದೆ. 2012ರಲ್ಲಿ ಕಾಂಗ್ರೆಸ್ ಜತೆ ಸೇರಿ ಸ್ಪರ್ಧಿಸಿದ್ದ ಎನ್ಸಿಪಿ ಈ ಬಾರೀ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ. ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್ ವಿಪ್ ಉಲ್ಲಂ ಸಿ ಬಿಜೆಪಿಗೆ ಎನ್ಸಿಪಿಯ ಇಬ್ಬರು ಶಾಸಕರು ಮತ ಹಾಕಿದ್ದರು. ಶಂಕರ್ಸಿಂಗ್ ವಘೇಲಾ ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡು, ಜನ ವಿಕಲ್ಪ ಪಕ್ಷ ಸೇರಿದ್ದಾರೆ. ಒಬಿಸಿ ಮತ್ತು ಕ್ಷತ್ರಿಯರ ಮತಗಳನ್ನು ವಘೇಲರ ಜನ ವಿಕಲ್ಪ ಪಕ್ಷ ಸೆಳೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್