ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್: ಬಿಜೆಪಿ, ಕಾಂಗ್ರೆಸ್ ವಾಕ್ಸಮರ
Team Udayavani, Jan 3, 2018, 4:00 PM IST
ಹೊಸದಿಲ್ಲಿ : ರಾಜ್ಯಸಭೆಯಲ್ಲಿ ಇಂದು ಬುಧವಾರ ತ್ರಿವಳಿ ತಲಾಕ್ ಅಪರಾಧೀಕರಿಸುವ ಮಸೂದೆಯನ್ನು ಮಂಡಿಸಲಾಯಿತು. ಆದರೆ ವಿರೋಧ ಪಕ್ಷ ಕಾಂಗ್ರೆಸ್ ಕೋರೇಗಾಂವ್ – ಭೀಮಾ ದಲಿತ ಹಿಂಸಾತ್ಮಕ ಪ್ರತಿಭಟನೆಯ ವಿಷಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕಾರಣ ಸದನದಲ್ಲಿ ಭಾರೀ ಗದ್ದಲ, ಗೊಂದಲ ಉಂಟಾಯಿತು.ಬಿಜೆಪಿ, ಕಾಂಗ್ರೆಸ್ ನಡುವೆ ವಾಕ್ಸಮರವೇ ಸ್ಫೋಟಿಸಿತು.
‘ಇದು ತ್ರಿವಳಿ ತಲಾಕ್ ಮಸೂದೆಗೆ ತಡೆ ಒಡ್ಡುವ ಕಾಂಗ್ರೆಸ್ ಮತ್ತು ವಿಪಕ್ಷಗಳ ತಂತ್ರೋಪಾಯವಾಗಿದೆ’ ಎಂದು ಮೇಲ್ಮನೆಯಲ್ಲಿ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ನೀಡಿದ ಹೇಳಿಕೆಯಿಂದ ವಿಪಕ್ಷೀಯರು ಕೆರಳಿದರು; ಗಲಭೆ ತಾರಕಕ್ಕೇರಿತು. ಆಳುವ ಬಿಜೆಪಿ ಸರಕಾರ ದಲಿತ ವಿರೋಧಿ ಎಂದು ವಿಪಕ್ಷೀಯರು ಬೊಬ್ಬಿಡತೊಡಗಿದರು.
ಈ ನಡುವೆ ಕಾಂಗ್ರೆಸ್ ನಾಯಕ ಆನಂದ್ ಶಮಾರ ಅವರು ಸದನದಲ್ಲಿ ನೊಟೀಸೊಂದನ್ನು ಮಂಡಿಸಿ ತ್ರಿವಳಿ ತಲಾಕ್ ಮಸೂದೆಯನ್ನು ರಾಜ್ಯಸಭೆಯ ಆಯ್ದ ಸಮಿತಿಗೆ ಉಲ್ಲೇಖೀಸಬೇಕು ಎಂದು ಹೇಳಿ ಸಮಿತಿಯ ಸಂಭಾವ್ಯ ಸದಸ್ಯರನ್ನು ಹೆಸರಿಸಿದರು.
ಇದಕ್ಕೆ ಮೊದಲು ಸದನದಲ್ಲಿ ಮಾತನಾಡಿದ ಕಾನೂನು ಸಚಿವ ಆರ್ ಎಸ್ ಪ್ರಸಾದ್ ಅವರು ಲೋಕಸಭೆಯಲ್ಲಿ ತ್ರಿವಳಿ ತಲಾಕ್ ನಿಷೇಧಿಸುವ ಮಸೂದೆ ಪಾಸಾದ ಬಳಿಕವೂ ಮೊರಾದಾಬಾದ್ನಲ್ಲಿ ಮಹಿಳೆಯೊಬ್ಬರಿಗೆ ಆಕೆಯ ಪತಿ ತ್ರಿವಳಿ ತಲಾಕ್ ನೀಡಿರುವುದು ವಿಪರ್ಯಾಸಕರ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್