ಮತ ಬ್ಯಾಂಕ್ಗಾಗಿ ತ್ರಿವಳಿ ತಲಾಖ್ ಮುಂದುವರಿದಿತ್ತು
Team Udayavani, Aug 19, 2019, 6:20 AM IST
ಹೊಸದಿಲ್ಲಿ: ವೋಟ್ ಬ್ಯಾಂಕ್ಗಾಗಿ ದೇಶವನ್ನು ಹೇಗೆ ವಿಭಜಿಸಲಾಯಿತೋ ಹಾಗೆಯೇ ತ್ರಿವಳಿ ತಲಾಖ್ನಂಥ ಕೆಟ್ಟ ಸಂಪ್ರದಾಯವನ್ನೂ ಅದೇ ಕಾರಣಕ್ಕಾಗಿಯೇ ಉಳಿಸಿಕೊಂಡು ಬರಲಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದಿಲ್ಲಿಯಲ್ಲಿ, ರವಿವಾರ ಸಂಜೆ ಆಯೋಜಿಸಲಾಗಿದ್ದ “ತ್ರಿವಳಿ ತಲಾಖ್ ನಿರ್ಮೂಲನೆ: ಇತಿಹಾಸದ ಪ್ರಮಾದದ ತಿದ್ದುಪಡಿ’ ಎಂಬ ವಿಷಯದ ಮೇಲಿನ ವಿಚಾರ ಸಂಕಿರಣ ವೊಂದರಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್ ರದ್ದತಿ ಯಿಂದ ಅನುಕೂಲವಾಗುವುದು ಮುಸ್ಲಿಂ ಸಮುದಾ ಯಕ್ಕೇ ಹೊರತು, ಅನ್ಯರಿಗಲ್ಲ. ತ್ರಿವಳಿ ತಲಾಖ್ ರದ್ದತಿಯನ್ನು ಟೀಕಿಸು ತ್ತಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, “ರಾಜಕೀಯ ಒಲೈಕೆಗಾಗಿ ತ್ರಿವಳಿ ತಲಾಖ್ ತಂಟೆಗೆ ಹೋಗದೇ ವರ್ಷಗಟ್ಟಲೆ ಸುಮ್ಮನಿದ್ದ ಕಾಂಗ್ರೆಸ್ಸಿಗೆ ನಾಚಿಕೆಯಾಗಬೇಕು. 2014ರಲ್ಲಿ ಮೋದಿ ಯವರು ಪ್ರಧಾನಿಯಾದ ಅನಂತರ ಲಾಭದ ರಾಜಕೀಯಗಳಿಗೆ ತೆರೆ ಎಳೆಯಲಾಗಿದೆ’ ಎಂದರು.