ಕಣ್ಮರೆಯಾದ ಎರಡು ದಿನಗಳ ಬಳಿಕ ನಾಲ್ವರು ಮೀನುಗಾರರಿದ್ದ ದೋಣಿ ರಕ್ಷಣೆ
Team Udayavani, Nov 30, 2020, 6:20 AM IST
ಮುಂಬಯಿ: ಕಣ್ಮರೆಯಾದ ಎರಡು ದಿನಗಳ ನಂತರ ನಾಲ್ಕು ಸಿಬ್ಬಂದಿಗಳನ್ನು ಒಳಗೊಂಡ ಮೀನುಗಾರಿಕಾ ದೋಣಿ ಪಾಲ್ಗರ್ ಜಿಲ್ಲೆಯ ಕರಾವಳಿಯಲ್ಲಿ ಪತ್ತೆಯಾಗಿದೆ. 26/11 ಭಯೋತ್ಪಾದಕರ ದಾಳಿಯ ಕರಾಳ ದಿನದಂದೆ ಈ ಘಟನೆ ನಡೆದಿದ್ದು, ಅಪಹರಣದ ಭೀತಿಯನ್ನು ಹುಟ್ಟುಹಾಕಿತ್ತು.
ಗುರುವಾರ ಬೆಳಗ್ಗೆ 6 ಗಂಟೆಗೆ ಪಾಲ್ಗರ್ ನ ಸತ್ಪತಿ ಗ್ರಾಮದಿಂದ ಹೊರಟ ಮೀನುಗಾರರರಾದ ಜ್ಞಾನೇಶ್ವರ ತಾಂಡೆಲ್ (51), ದಿಲೀಪ್ ತಾಂಡೆಲ್ (55), ಜಗನ್ನಾಥ್ ತಾಂಡೆಲ್ (61) ಮತ್ತು ಪ್ರವೀಣ್ ಧನು (38) ನಾಪತ್ತೆಯಾಗಿದ್ದರು.
ಮಾಮೂಲಿಯಂತೆ ಮೀನುಗಾರರು ಸಂಜೆ 5ರ ಹೊತ್ತಿಗೆ ಹಿಂತಿರುಗುವ ನಿರೀಕ್ಷೆಯಿತ್ತು. ಆದರೆ ಅವರ ದೋಣಿ ರಾತ್ರಿಯಾದರೂ ಹಿಂದೆ ಬಂದಿರಲಿಲ್ಲ. ಶುಕ್ರವಾರ ಬೆಳಗ್ಗೆ ಕೂಡ ದೋಣಿಯ ಸುದ್ದಿ ಇಲ್ಲದ ಕಾರಣ ಗ್ರಾಮದ ಮೀನುಗಾರರ ಸಮಾಜವು ಸಭೆ ನಡೆಸಿತ್ತು.
ಜ್ಞಾನೇಶ್ವರ ತಾಂಡೆಲ್ ಅವರ ಪತ್ನಿ ಸುಜಾತಾ ಅವರು ಈ ಬಗ್ಗೆ ಸತ್ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೋಣಿಯಲ್ಲಿ ಸ್ವಯಂಚಾಲಿತ ಗುರುತಿನ ವ್ಯವಸ್ಥೆಯ ಟ್ರಾನ್ಸ್ಪಾಂಡರ್ ಮತ್ತು ಜಿಪಿಎಸ್ ಹೊಂದಿರದ ಕಾರಣ ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ಗೆ ದೋಣಿಯನ್ನು ಹುಡುಕಲು ಕಷ್ಟಕರವಾಗಿತ್ತು.
12 ವರ್ಷಗಳ ಹಿಂದೆ, ಪಾಕಿಸ್ತಾನ ಭಯೋತ್ಪಾದಕರು ಮುಂಬಯಿಗೆ ಬಂದಾಗ ಭಾರತೀಯ ಮೀನುಗಾರಿಕಾ ದೋಣಿ ಅಪಹರಿಸಿದ ಘಟನೆ ಪುನರಾವರ್ತನೆಯ ಆತಂಕದಿಂದ ಜಿಲ್ಲಾ ಪೊಲೀಸರು ನೌಕಾಪಡೆ, ಕೋಸ್ಟ್ ಗಾರ್ಡ್, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ, ಮುಂಬಯಿ ಪೊಲೀಸ್, ಮಹಾರಾಷ್ಟ್ರ ಕಡಲ ಮಂಡಳಿ, ಮೀನುಗಾರಿಕೆ ಇಲಾಖೆ ಮತ್ತು ಗುಜರಾತ್ ಸರಕಾರ ಈ ಬಗ್ಗೆ ಪ್ರಮುಖ ಭಾಗಗಳಲ್ಲಿ ಎಚ್ಚರಿಕೆ ವಹಿಸಿತ್ತು.
ಈ ಮಧ್ಯೆ ಸ್ಥಳೀಯ ಮೀನುಗಾರ ಪ್ರದೀಪ್ ಪಾಟೀಲ್ ಎಂಬವರು ಗುರುವಾರ ಸಂಜೆ 5 ಗಂಟೆಗೆ ತಮ್ಮ ಸ್ವಂತ ದೋಣಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ನಾಪತ್ತೆಯಾದ ದೋಣಿಯನ್ನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದು ಬಳಿಕ ಕಾರ್ಯಾಚರಣೆಗಿಳಿದ ತಂಡವು ದೋಣಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ. ಶನಿವಾರ 10 ಗಂಟೆಗೆ ಒಂಬತ್ತು ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ದೋಣಿಯನ್ನು ಗುರುತಿಸಲಾಗಿದ್ದು, ಕಾಣೆಯಾದವರನ್ನು ಮರಳಿ ಮನೆಗೆ ಕರೆತರಲಾಗಿದೆ.
ತಾಂತ್ರಿಕ ದೋಷಣದಿಂದ ಮೀನುಗಾರರಿಗೆ ದಾರಿತಪ್ಪಿರುವುದಾಗಿ ತಿಳಿದು ಬಂದಿದೆ. ಕಾಣೆಯಾದ ಮೀನುಗಾರರು ಕೇವಲ ಒಂದು ದಿನ ಆಹಾರವನ್ನು ಮಾತ್ರ ಹೊಂದಿದ್ದು, ಆದರೆ ಅವರಿಗೆ ಕುಡಿಯಲು ಸಾಕಷ್ಟು ನೀರಿತ್ತು. ಮೀನುಗಾರರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
MUST WATCH
ಹೊಸ ಸೇರ್ಪಡೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ