ಬಾಲಕಿ ಮೇಲೆ ಇಬ್ಬರು ಬಸ್ ಚಾಲಕರು, ಕಂಡಕ್ಟರ್ನಿಂದ ಗ್ಯಾಂಗ್ ರೇಪ್
Team Udayavani, Jun 7, 2017, 10:56 AM IST
ಸೇಲಂ : 2012ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ನಿರ್ಭಯಾ ಮೇಲೆ ನಡೆದಿದ್ದ ಅತ್ಯಮಾನುಷ ಗ್ಯಾಂಗ್ ರೇಪ್ ಪ್ರಕರಣವನ್ನು ನೆನಪಿಸುವ ರೀತಿಯಲ್ಲಿ ಸೇಲಂ ಜಿಲ್ಲೆಯ ನಾರಾಯಣಪಾಳ್ಯಂ ನಲ್ಲಿ ಹದಿನೈದರ ಹರೆಯದ ಬಾಲಕಿಯ ಮೇಲೆ ಇಬ್ಬರು ಬಸ್ ಚಾಲಕರು ಮತ್ತು ಓರ್ವ(ಇದನ್ನೂ ಓದಿ:ಚಲಿಸುತ್ತಿದ್ದ ಆಟೋದಿಂದ ಮಗುವನ್ನು ಎಸೆದು ತಾಯಿ ಮೇಲೆ ಗ್ಯಾಂಗ್ ರೇಪ್) ಕಂಡಕ್ಟರ್ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಮೊನ್ನೆ ಸೋಮವಾರ ರಾತ್ರಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಗ್ರಾಮವೊಂದರಲ್ಲಿ ಬಸ್ಸನ್ನು ನಿಲ್ಲಿಸಿದ ಬಳಿಕ ಹುಡುಗಿಯ ಮೇಲೆ ಗ್ಯಾಂಗ್ ರೇಪ್ ಎಸಗಿದ ಮೂವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹುಡುಗಿಯ ಆಕ್ರಂದನ ಕೇಳಿಸಿಕೊಂಡ ಗ್ರಾಮಸ್ಥರು ಒಡನೆಯೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಆಗಲೇ ಆಕೆಯ ಮೇಲೆ ಕಾಮುಕರಿಂದ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂತು.
ಪೊಲೀಸರ ಪ್ರಕಾರ ಹುಡುಗಿಯು ಮೊನ್ನೆ ಸೋಮವಾರ ಮನೆಯಲ್ಲಿ ಹೆತ್ತವರೊಂದಿಗೆ ಜಗಳ ಮಾಡಿ ಸಿಟ್ಟಿನಿಂದ ಮನೆಯನ್ನು ತ್ಯಜಿಸಿ ಹೊರಗೆ ಅಂಡಲೆಯುತ್ತಿದ್ದಳು. ಮಧ್ಯಾಹ್ನದ ಹೊತ್ತಿಗೆ ಸ್ಥಳೀಯ ಬಸ್ಸೊಂದನ್ನು ಏರಿ ರಾತ್ರಿ ತನಕವೂ ಅದೇ ಬಸ್ಸಿನಲ್ಲಿ ಅತ್ತಿಂದಿತ್ತ ಪ್ರಯಾಣಿಸುತ್ತಲೇ ಇದ್ದಳು. ಹಾಗಾಗಿ ರಾತ್ರಿ ವೇಳೆ ಈಕೆ ಕಾಮುಕರಿಗೆ ಸುಲಭದ ತುತ್ತಾದಳು.
ಬಂಧಿತರನ್ನು ಬಸ್ ಚಾಲಕರಾದ ಸನ್ಯಾಸಿಕುಂಡು ನಿವಾಸಿ ಎಸ್ ಮಣಿವಣ್ಣನ್ 31, ಅತಿಕಾರಿಪಟ್ಟಿ ನಿವಾಸಿ ಪಿ. ಮುರುಗನ್ 35, ಮತ್ತು ಸನ್ಯಾಸಿಕುಂಡು ನಿವಾಸಿಯಾಗಿರುವ ಕಂಡಕ್ಟರ್ ಕೆ ಪೆರುಮಾಳ್ 22 ಎಂದು ಗುರುತಿಸಲಾಗಿದೆ. ಇವರು ಹುಡುಗಿಯನ್ನು ಸಮಾಧಾನಿಸುತ್ತಾ ಆಕೆಯ ಸ್ನೇಹವನ್ನು ಗಳಿಸಿದ್ದರು. ಬಳಿಕ ರಾತ್ರಿ ಹೊತ್ತು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು.
9ನೇ ಕ್ಲಾಸ್ ತನಕ ಓದಿರುವ ಹುಡುಗಿಯು ಮೂರು ವರ್ಷಗಳ ಹಿಂದೆ ಇದೇ ಜಿಲ್ಲೆಯ ವೀರನಂ ಗ್ರಾಮದ ನಿವಾಸಿ 20ರ ಹರೆಯದ ಜಿ ವಿಜಯನ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು. ಆತ ಹಲವು ಬಾರಿ ಆಕೆಯನ್ನು ರೇಪ್ ಮಾಡಿದ್ದ ಮತ್ತು ಈಚೆಗೆ ತನ್ನ ಸ್ನೇಹಿತನಾಗಿರುವ ಕೆ ಪೆರುಮಾಳ್ ಗೆ ಆಕೆಯನ್ನು ಪರಿಚಯಿಸಿದ್ದ. ಅನಂತರದಲ್ಲಿ ಆಕೆ ಪೆರುಮಾಳ್ಗೆ ನಿಕಟವಾಗಿದ್ದಳು.
ಹುಡುಗಿಯ ಹೇಳಿಕೆಯನ್ನು ಆಧರಿಸಿ ಓಮಳೂರು ಪೊಲೀಸರು ವಿಜಯನ್ ನನ್ನು ಕೂಡ ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ