ಪಾಕ್ ಸೇನೆಯ ಗುಂಡಿಗೆ ಇಬ್ಬರು ಯೋಧರು ಹುತಾತ್ಮ
Team Udayavani, Dec 7, 2018, 6:00 AM IST
ಜಮ್ಮು/ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಮಚಿಲ್ ಸೆಕ್ಟರ್ನಲ್ಲಿ ಪಾಕಿಸ್ತಾನದ ಯೋಧರು ಅಪ್ರಚೋ ದಿತವಾಗಿ ಹಾರಿಸಿದ ಗುಂಡು ತಗುಲಿ ಯೋಧರೊಬ್ಬರು ಹುತಾತ್ಮ ರಾಗಿದ್ದಾರೆ. ಬೆಳಗ್ಗೆ 10.45ಕ್ಕೆ ಈ ಘಟನೆ ನಡೆದಿದೆ ಎಂದು ಸೇನೆ ಹೇಳಿದೆ. ಬುಧವಾರ ಉರಿ ವಲಯದಲ್ಲಿ ನಡೆದಿದ್ದ ಫೈರಿಂಗ್ನಲ್ಲಿ ಯೋಧರೊಬ್ಬರಿಗೆ ಗಾಯಗಳಾಗಿವೆ.
ಮತ್ತೂಂದು ಘಟನೆಯಲ್ಲಿ ಸುಂದರ್ಬನಿ ವಲಯದಲ್ಲಿ ಗಡಿಯಾಚೆಯಿಂದ ಪಾಕ್ ಯೋಧರು ನಡೆಸಿದ ಸ್ನೆ„ಪರ್ ದಾಳಿಯಿಂದ ಬಿಎಸ್ಎಫ್ನ ಕಾನ್ಸ್ಟೇಬಲ್ ಪಿ.ಬಿಸ್ವಾಸ್ ಹುತಾತ್ಮನಾಗಿದ್ದು, ಯೋಧ ಮಾನ್ಸಾ ರಾಮ್ ಎಂಬುವರಿಗೆ ಗಾಯಗಳಾಗಿವೆ.
ಇಮ್ರಾನ್ ಖಾನ್ ಆರೋಪ: ಈ ನಡುವೆ, ಸಿಖ್ಬರಿಗಾಗಿ ಕರ್ತಾರ್ಪುರ್ ಕಾರಿಡಾರ್ ಸ್ಥಾಪಿಸಲು ನಾವು ಮುಂದಾಗಿದ್ದರೂ, ಭಾರತ ಸರ್ಕಾರ ಅದರಲ್ಲಿ ರಾಜಕೀಯ ಹುಡುಕುತ್ತಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಪಂಜಾಬ್ ಸಚಿವ ನವ್ಜೋತ್ ಸಿಧು ಈ ವಿಚಾರವನ್ನು ತಮ್ಮ ಬಳಿ ಪ್ರಸ್ತಾಪಿಸಿದ್ದರು. ಭಾರತದ ಮಾಧ್ಯಮಗಳು ಕರ್ತಾರ್ಪುರ್ ವಿಚಾರಕ್ಕೆ ರಾಜಕೀಯದ ಬಣ್ಣ ಕೊಟ್ಟು ವರದಿ ಮಾಡಿವೆ ಎಂದೂ ಖಾನ್ ಆಕ್ಷೇಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು