ಟೈರ್ಗಳಿಗೆ ಮೂರು ಗುಣಮಟ್ಟ ನಿಗದಿ: ಅಪಘಾತ ತಡೆಯಲು ಕೇಂದ್ರ ಸಾರಿಗೆ ಇಲಾಖೆಯ ಆದೇಶ
ಅಕ್ಟೋಬರ್ನಿಂದ ಕಾರು, ಬಸ್, ಟ್ರಕ್ಗಳ ಟೈರುಗಳ ಗುಣಮಟ್ಟದಲ್ಲಿ ಬದಲಾವಣೆ
Team Udayavani, Jul 2, 2022, 6:55 AM IST
ನವದೆಹಲಿ: ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ಜಾರಿಗೊಳಿಸುತ್ತಿರುವ ಕೇಂದ್ರ ಸಾರಿಗೆ ಸಚಿವಾಲಯ, ಇದೀಗ ವಾಹನಗಳ ಟೈರ್ಗಳ ಸುಧಾರಣೆಯ ಕಡೆಗೆ ತನ್ನ ಗಮನ ಹರಿಸಿದೆ.
ಮಳೆ ಮತ್ತಿತರ ಸಂದರ್ಭಗಳಲ್ಲಿ ವಾಹನಗಳ ಸುಗಮ ಚಾಲನೆ ಸಾಧ್ಯವಾಗದ ಕಾರಣ ಅಪಘಾತಗಳು ಸಂಭವಿಸುವ ಹಿನ್ನೆಲೆಯಲ್ಲಿ ಟೈರುಗಳ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೂರು ಗುಣಮಟ್ಟಗಳನ್ನು ನಿಗದಿಗೊಳಿಸಿ ಸಚಿವಾಲಯ ಆದೇಶ ಹೊರಡಿಸಿದೆ. ಚಕ್ರಗಳ ತಿರುಗುವ ಸಾಮರ್ಥ್ಯ ಚೆನ್ನಾಗಿರಬೇಕು, ಒದ್ದೆಯಾಗಿರುವಾಗಲೂ ಹಿಡಿತ ಚೆನ್ನಾಗಿರಬೇಕು, ತಿರುಗುವಾಗ ಶಬ್ದ ಕಡಿಮೆಯಿರಬೇಕು ಎಂದು ಸೂಚಿಸಿದೆ.
2019ರಲ್ಲಿ ಹೊರಡಿಸಿದ ವಾಹನೋದ್ಯಮಗಳ ನಿಯಮಗಳಿಗೆ ತಕ್ಕಂತಿರಬೇಕು ಎಂದು ಎಲ್ಲಾ ಟೈರು ತಯಾರಿಕಾ ಕಂಪನಿಗಳಿಗೆ ತಿಳಿಸಲಾಗಿದೆ. ಅಲ್ಲದೆ, ಈ ವರ್ಷ ಅಕ್ಟೋಬರ್ನಿಂದ ಕಾರುಗಳು, ಬಸ್ಗಳು, ಟ್ರಕ್ಗಳ ಟೈರುಗಳು ಮೂರು ವಿಧದ ಗುಣಮಟ್ಟವನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.
ಏನು ಲಾಭ?:
ಟೈರ್ಗಳು ಹೆಚ್ಚೆಚ್ಚು ತಿರುಗುವ ಸಾಮರ್ಥ್ಯ ಪಡೆದಾಗ ಇಂಧನ ಉಳಿತಾಯವಾಗುತ್ತದೆ. ಅದಕ್ಕಾಗಿ ಎಂಜಿನ್ ಹೆಚ್ಚಿನ ಇಂಧನ ಬಳಸುವುದನ್ನು ತಡೆಯಬಹುದು. ಒದ್ದೆಯಾದಾಗಲೂ ಟೈರ್ಗಳು ಉತ್ತಮ ಹಿಡಿತವನ್ನು ಹೊಂದಿದ್ದರೆ ಬ್ರೇಕ್ ಸಾಮರ್ಥ್ಯ ವೃದ್ಧಿಸುತ್ತದೆ, ಸುರಕ್ಷತೆಯೂ ಉತ್ತಮಗೊಳ್ಳುತ್ತದೆ. ಟೈರ್ಗಳು ಕಡಿಮೆ ಶಬ್ದ ಉಂಟು ಮಾಡುವಂತೆ ಬದಲಾದರೆ, ರಸ್ತೆಗಳಲ್ಲಿ ಶಬ್ದದ ಪ್ರಮಾಣವನ್ನು ತಗ್ಗಿಸಬಹುದು ಎಂದು ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?