ಇದು ಸರ್ಜಿಕಲ್ ದಾಳಿ: ಉದ್ಧವ್
Team Udayavani, Nov 24, 2019, 1:27 AM IST
ಬಿಜೆಪಿ ನಡೆಸಿರುವುದು ಮಹಾರಾಷ್ಟ್ರದ ಮೇಲೆ ನಡೆಸಿದ ರಾಜಕೀಯ ಸರ್ಜಿಕಲ್ ದಾಳಿ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ದೂರಿದ್ದಾರೆ. ಎನ್ಸಿಪಿ ನಾಯಕ ಶರದ್ ಪವಾರ್ ಜತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ತಂತ್ರ ರೂಪಿಸಲಾಗುತ್ತಿತ್ತು. ಇದೊಂದು ಹೊಸ ತಂತ್ರವಾಗಿದೆ. ಹೀಗಾದಲ್ಲಿ ಚುನಾವಣೆ ನಡೆಸುವ ಅಗತ್ಯವೇ ಬರುವುದಿಲ್ಲ ಎಂದರು. ಬಿಜೆಪಿಯವರು ಶಿವಸೇನೆ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದರೆ ಸುಮ್ಮನಿರುವುದಿಲ್ಲ ಎಂದರು.
ಸಾಮ್ನಾದಲ್ಲಿ: ಬಿಜೆಪಿ ನಾಯಕರು ಅಜಿತ್ ಪವಾರ್ ಅವರನ್ನು ಬ್ಲಾಕ್ಮೇಲ್ ಮಾಡಿ, ಬುಟ್ಟಿಗೆ ಹಾಕಿಕೊಂಡಿದ್ದಾರೆ ಶಿವಸೇನೆಯ ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ. ಬಿಜೆಪಿಯ ಯಾವ್ಯಾವ ನಾಯಕರು ಇಂಥ ಕೆಲಸ ಮಾಡಿದ್ದಾರೋ ಅವರೆಲ್ಲರ ಹೆಸರನ್ನು ಹಾಗೂ ಅವರ ಮಾಡಿರುವ ಕೆಲಸವನ್ನು ಶಿವಸೇನೆಯ ಮುಖವಾಣಿಯಾದ ಸಾಮ್ನಾದಲ್ಲಿ ಎಳೆಎಳೆಯಾಗಿ ಬಿಡಿಸಿಡುವುದಾಗಿ ತಿಳಿಸಿದ್ದಾರೆ.
‘ಇಡೀ ಬೆಳವಣಿಗೆಯ ಹಿಂದೆ ಶರದ್ ಪವಾರ್ರವರ ಪಾತ್ರವೇನೂ ಇಲ್ಲ. ಆದರೆ, ನೂತನ ಸರಕಾರ ರಚನೆಯ ಬಗ್ಗೆ ನಡೆಸಲಾದ ಮಾತುಕತೆಯ ಎಲ್ಲ ಹಂತದಲ್ಲೂ ಅಜಿತ್ ನಮ್ಮ ಜತೆಗೆ ಇದ್ದವರು. ಸೋಮವಾರ ರಾತ್ರಿಯೂ ಸರಕಾರ ರಚನೆಯ ಮಾತುಕತೆ ಫೈನಲ್ ಆದ ವೇಳೆ ನಮ್ಮೆಲ್ಲರ ಜತೆಗೆ ಕುಳಿತಿದ್ದರು. ಆದರೆ, ಇದ್ದಕ್ಕಿದ್ದಂತೆ ಮಾಯವಾದ ಅವರು, ಬಿಜೆಪಿ ಜತೆಗೆ ಕೈ ಜೋಡಿಸಿ ಸರಕಾರ ರಚಿಸುವ ಮೂಲಕ ಅವರು ಹಾಗೂ ಅವರ ಜತೆಗೆ ಹೋಗಿರುವ ಎನ್ಸಿಪಿ ಶಾಸಕರು, ಶಿವಾಜಿ ಮಹಾರಾಜ್ ಹಾಗೂ ಮಹಾರಾಷ್ಟ್ರದ ಜನತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ” ಎಂದು ಅವರು ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ