ಅಪಹರಣ ಯತ್ನ ವಿಫಲ, ಆಕ್ರೊಶಗೊಂಡು ಯುವತಿ ಮೂಗನ್ನೇ ಕತ್ತರಿಸಿದ ಕಿಡ್ನಾಪರ್ಸ್!
ಈ ಗ್ರಾಮದಲ್ಲಿನ ಬಲಾಢ್ಯ ವ್ಯಕ್ತಿಗಳು ಅವರು. ಅವರು ರಾಜಾರೋಷವಾಗಿ ಎಲ್ಲರ ಜತೆ ಹೊಡೆದಾಡುತ್ತಾರೆ.
Team Udayavani, Dec 30, 2019, 11:30 AM IST
ಗುರುಗ್ರಾಮ್: ಯವತಿಯನ್ನು ಅಪಹರಿಸಲು ವಿಫಲವಾಗಿದ್ದಕ್ಕೆ ಆಕ್ರೋಶಗೊಂಡ ಗುಂಪೊಂದು ಆಕೆಯ ಮೂಗನ್ನು ಕತ್ತರಿಸಿ ಹಾಕಿರುವ ಘಟನೆ ಗುರುಗ್ರಾಮದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಚಾಕ್ಕಾರ್ ಪುರ್ ಗ್ರಾಮದಲ್ಲಿನ ಮನೆಯಲ್ಲಿದ್ದಾಗ ಗೌರವ್ ಯಾದವ್, ಆಕಾಶ್ ಯಾದವ್, ಸತೀಶ್ ಯಾದವ್, ಮೋನು ಯಾದವ್ ಮತ್ತು ಲೀಲೂ ಯಾದವ್ ಮನೆಯೊಳಗೆ ನುಗ್ಗಿ ಆಕೆಯನ್ನು ಹೊರಗೆಳೆದು ಅಪಹರಿಸಲು ಯತ್ನಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಅಪಹರಣಕಾರರನ್ನು ತಡೆಯಲು ಯತ್ನಿಸಿರುವುದಾಗಿ ಯವತಿಯ ಸಹೋದರ ತಿಳಿಸಿದ್ದಾನೆ. ಆದರೆ ಯವತಿಯನ್ನು ಮನೆಯೊಳಗಿನಿಂದ ಹೊರಗೆ ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಇಬ್ಬರು ಆಕೆಯ ಮೂಗನ್ನು ಹರಿತ ಆಯುಧದಿಂದ ಕತ್ತರಿಸಿ ಹಾಕಿರುವುದಾಗಿ ವರದಿ ತಿಳಿಸಿದೆ.
ಈ ಗ್ರಾಮದಲ್ಲಿನ ಬಲಾಢ್ಯ ವ್ಯಕ್ತಿಗಳು ಅವರು. ಅವರು ರಾಜಾರೋಷವಾಗಿ ಎಲ್ಲರ ಜತೆ ಹೊಡೆದಾಡುತ್ತಾರೆ. ಅಲ್ಲದೇ ಪೊಲೀಸ್ ಠಾಣೆಗೆ ದೂರು ನೀಡಿದರೆ ಬೆದರಿಕೆ ಮೂಲಕ ವಾಪಸ್ ಪಡೆಯುವಂತೆ ಮಾಡುತ್ತಾರೆ. ನಮಗೂ ಕೂಡಾ ಹಾಗೆ ಮಾಡುತ್ತಾರೆ. ಇದರಿಂದ ನಮಗೆ ಭಯ ಆವರಿಸಿದೆ ಎಂದು ಯುವತಿಯ ಸಹೋದರ ದಿವೀನ್ ದಯಾಲ್ ತಿಳಿಸಿದ್ದರು. ಘಟನೆ ಬಗ್ಗೆ ಗುರ್ಗಾಂವ್ ಸೆಕ್ಟರ್ 29ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ