ನಕ್ಸಲ್ ಭೂಗತ ಜಾಲ, ಐವರು ಮಾಸ್ಟರ್ ಮೈಂಡ್ ಪತ್ತೆ : ಗುಪ್ತಚರ ವರದಿ
Team Udayavani, Aug 30, 2018, 11:14 AM IST
ಹೊಸದಿಲ್ಲಿ : ನಕ್ಸಲರ ಭೂಗತ ಜಾಲವನ್ನು ಮತ್ತು ದೇಶದ ವಿವಿಧ ನಗರಗಳಲ್ಲಿ ಕಾರ್ಯಾಚರಿಸುತ್ತಿರುವ ಅದರ ಐವರು ಮಾಸ್ಟರ್ ಮೈಂಡ್ಗಳನ್ನು ಗುಪ್ತಚರ ದಳ ಗುರುತಿಸಿರುವ ಮಹತ್ವದ ಬೆಳವಣಿಗೆ ವರದಿಯಾಗಿದೆ.
ನಿಷೇಧಿತ ಸಿಪಿಎಂ ನಕ್ಸಲರ ದೇಶಾದ್ಯಂತದ ಭೂಗತ ಜಾಲದ ಬಗ್ಗೆ ಕೇಂದ್ರ ಸರಕಾರಕ್ಕೆ ಗುಪ್ತಚರ ದಳ ವಿಸ್ತೃತ ವರದಿಯನ್ನು ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ನಕ್ಸಲ್ ಭೂಗತ ಜಾಲ ದೇಶಾದ್ಯಂತದ ವಿವಿಧ ನಗರಗಳಲ್ಲಿ ಇರುವುದನ್ನು ಮತ್ತು ಅದರ ಐವರು ಮಾಸ್ಟರ್ ಮೈಂಡ್ಗಳು ದೀರ್ಘಕಾಲದಿಂದ ಕಾರ್ಯಾಚರಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಗುಪ್ತಚರ ದಳ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿರುವ ವರದಿ ಹೇಳಿದೆ.
ಗೃಹ ಸಚಿವಾಲಯಕ್ಕೆ ಗುಪ್ತಚರ ದಳ ಸಲ್ಲಿಸಿರುವ ವರದಿಯಲ್ಲಿ ನಾಗ್ಪುರದ ಓರ್ವ ಪ್ರೊಫೆಸರ್, ಓರ್ವ ವಕೀಲ, ಓರ್ವ ಪತ್ರಕರ್ತ ತ್ತು ಓರ್ವ ಸಾಮಾಜಿಕ ಕಾರ್ಯಕರ್ತ ಹೆಸರಿಸಲ್ಪಿದ್ದಾರೆ.
ನಕ್ಸಲ್ ಸಂಬಂಧಿ ಚಟುವಟಿಕೆಗಳಲ್ಲಿ ಮತ್ತು ಭೀಮಾ ಕೋರೇಗಾಂವ್ ಹಿಂಸೆಯಲ್ಲಿ ಇವರ ಶಂಕಿತ ಪಾತ್ರ ಇರುವುದರ ಬಗ್ಗೆ ಬಲವಾದ ಮಾಹಿತಿ ಲಭಿಸಿದೆ ಎಂದು ಗುಪ್ತಚರ ದಳ ತನ್ನ ಎರಡು ಪುಟಗಳ ವರದಿಯಲ್ಲಿ ಹೇಳಿದೆ.
ಕಾಶ್ಮೀರ ಕಣಿವೆಯಲ್ಲಿರುವ ವಿವಿಧ ಉಗ್ರ ಸಂಘಟನೆಗಳು ಮತ್ತು ಸಿಪಿಐ ಎಂ ಮಾವೋವಾದಿಗಳ ನಡುವೆ ನಿಕಟ ನಂಟನ್ನು ಬೆಸೆಯುವಲ್ಲಿ ಅನೇಕ ಶಂಕಿತ ನಕ್ಸಲ್ ಸಹಾನುಭೂತಿದಾರರು ಯತ್ನಿಸುತ್ತಿದ್ದಾರೆ ಎಂದು ವರದಿಯು ಹೇಳಿದೆ.
ಕಳೆದ ವರ್ಷ ಸಂಭವಿಸಿದ್ದ ಭೀಮಾ ಕೋರೇಗಾಂವ್ ಹಿಂಸೆಯ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸರು ಕಾಶ್ಮೀರದಲ್ಲಿ ಸಂಗ್ರಹಿಸಿರುವ ಅನೇಕ ಮೂಲಗಳ ಮಾಹಿತಿ ಮತ್ತು ವಶಪಡಿಸಿಕೊಂಡಿರುವ ಪತ್ರದ ಆಧಾರದಲ್ಲಿ ದೇಶಾದ್ಯಂತದ ನಕ್ಸಲ್ ಜಾಲ ಮತ್ತು ಅದರ ಐವರು ಮಾಸ್ಟರ್ ಮೈಂಡ್ಗಳು ಕಾರ್ಯಾಚರಿಸುತ್ತಿರುವುದರ ಬಗ್ಗೆ ಗುಪ್ತ ಚರ ದಳ ತನ್ನ ವರದಿಯಲ್ಲಿ ವಿಸ್ತೃತ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
MUST WATCH
ಹೊಸ ಸೇರ್ಪಡೆ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ