ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Team Udayavani, Jun 30, 2019, 2:50 PM IST
ಥಾಣೆ: ವಿಚಾರಣೆ ವೇಳೆ ಆರೋಪಿಯು ನೇರ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಘಟನೆ ಥಾಣೆ ನ್ಯಾಯಾಲಯದಲ್ಲಿ ಸಂಭವಿಸಿದೆ. ಚಪ್ಪಲಿಯು ನ್ಯಾಯಾಧೀಶರ ಬಲ ಹೆಗಲ ಮೇಲೆ ಬಿದ್ದಿದ್ದು, ಆರೋಪಿಯು ನ್ಯಾಯಾಂಗವನ್ನು ನಿಂದಿಸಿದ್ದಾರೆ. ಆರೋಪಿಯ ವಿರುದ್ಧ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಜಿಲ್ಲೆ ಮತ್ತು ಥಾಣೆ ನ್ಯಾಯಾಲಯದ ಸೆಶಸ್ತ್ರ ನ್ಯಾಯಾಧೀಶ ರಾಜೇಶ್ ಗುಪ್ತಾ ಅವರ ನೇತೃತ್ವದಲ್ಲಿ ವಿಚಾರಣೆ ವೇಳೆ ಆರೋಪಿ ಗಣೇಶ್ ಗಾಯಕ್ವಾಡ್ನನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು “ನಿಮ್ಮ ವಕೀಲರು ಬಂದಿದ್ದಾರಾ?’ ಎಂದು ಕೇಳಿದರು. ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ, ನೀವೇ ನನಗೆ ವಕೀಲರನ್ನು ನೀಡಿದ್ದು, ಅವರು ವಿಚಾರಣೆ ವೇಳೆ ಬರುತ್ತಿಲ್ಲ, ಎಂದು ಆರೋಪಿ ಉತ್ತರಿಸಿದ. “ನಿಮಗೆ ಇನ್ನೊಬ್ಬ ವಕೀಲರನ್ನು ನೀಡುತ್ತೇನೆ, ಮುಂದಿನ ತಾರೀಕಿನಲ್ಲಿ ಪ್ರಕರಣದ ವಿಚಾರಣೆ ನಡೆಸುವ ಎಂಬ ನ್ಯಾಯಾಧೀಶರ ಹೇಳಿಕೆಯ ಅನಂತರ ಗಣೇಶ್ ತನ್ನ ಚಪ್ಪಲ್ ತೆಗೆದುಕೊಂಡು ನ್ಯಾಯಾಧೀಶರಿಗೆ ಎಸೆದಿದ್ದ. ಈ ವೇಳೆ ಭದ್ರತೆಯಲ್ಲಿದ್ದ ಪೊಲೀಸರು ಗಣೇಶನನ್ನು ವಶಕ್ಕೆ ತೆಗೆದುಕೊಂಡರು. ನ್ಯಾಯಾಧೀಶರ ಆದೇಶದ ಅನಂತರ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು