ಸಭೆಯಲ್ಲಿ ಅನಾರೋಗ್ಯದಿಂದ ಬಳಲಿದ ಗಡ್ಕರಿ
Team Udayavani, Dec 30, 2017, 2:07 PM IST
ಮಾಜುಲಿ: ಅಸ್ಸಾಂನ ಮಾಜುಲಿ ದ್ವೀಪದಲ್ಲಿ ಕಾರ್ಯಕ್ರಮವೊಂದಕ್ಕಾಗಿ ಶುಕ್ರವಾರ ಆಗಮಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಸಾರ್ವಜನಿಕ ಸಭೆ ನಡೆಯುತ್ತಿದ್ದಂತೆಯೇ ಅನಾರೋಗ್ಯಕ್ಕೀಡಾದರು.
ಕೂಡಲೇ ವೈದ್ಯರು ವೇದಿಕೆಗೆ ಧಾವಿಸಿ ಗಡ್ಕರಿ ಅವರ ರಕ್ತದೊತ್ತಡ, ಮಧುಮೇಹದ ಪ್ರಮಾಣ ಪರೀಕ್ಷಿಸಿದರು.
ರಕ್ತದೊತ್ತಡದಲ್ಲಿ ವ್ಯತ್ಯಾಸವಾಗಿದ್ದ ಕಾರಣ ಅವರು ಬಳಲಿದ್ದರು. ಈಗ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.