ಹೋರಾಟಗಾರ್ತಿಯರ ಕೃತಿಯಲ್ಲಿ ರಾಣಿ ಅಬ್ಬಕ್ಕ!
Team Udayavani, Jan 28, 2022, 6:00 AM IST
ಹೊಸದಿಲ್ಲಿ: ಭಾರತ ಸ್ವಾತಂತ್ರೊéàತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಾಯಕ ಸಚಿವೆ ಮೀನಾಕ್ಷಿ ಲೇಖೀ “ಇಂಡಿಯಾಸ್ ವುಮೆನ್ ಅನ್ಸಂಗ್ ಹೀರೋಸ್’ ಪುಸ್ತಕ ಬಿಡುಗಡೆ ಮಾಡಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪರಿಚಿತರಲ್ಲದ 20 ಹೋರಾಟಗಾರ್ತಿಯರು ಇಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ರಾಣಿ ಅಬ್ಬಕ್ಕ ಕೂಡ ಇಲ್ಲಿ ಸ್ಥಾನ ಪಡೆದಿದ್ದಾರೆ. 16ನೇ ಶತಮಾನದಲ್ಲಿ ಈ ರಾಣಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ್ದರು. ಕೆಲವು ದಶಕಗಳ ಕಾಲ ವಿದೇಶಿ ದಾಳಿಯನ್ನು ಪೂರ್ಣವಾಗಿ ನಿಯಂತ್ರಿಸಿದ್ದರು. ಈಕೆಯ ಚರಿತ್ರೆ ಕರ್ನಾಟಕದಲ್ಲಿ ಪಠ್ಯಪುಸ್ತಕದಲ್ಲೂ ಸೇರಿತ್ತು.
ಅಬ್ಬಕ್ಕ ಅಲ್ಲದೇ ವೇಲು ನಾಚಿಯರ್, ಝಲ್ಕಾರಿ ಬಾಯಿ, ಮಾತಂಗಿನಿ ಹಾಝಾ, ಗುಲಾಬ್ ಕೌರ್, ಚಕಲಿ ಇಲ್ಲಮ್ಮಾ, ಪದ್ಮಜಾ ನಾಯ್ಡು, ಬಿಶ್ನಿ ದೇವಿ ಶಾ, ದುರ್ಗಾವತಿ ದೇವಿ, ಸುಚೇತಾ ಕೃಪಲಾನಿ ಅಂತಹ ಹೋರಾಟಗಾರ್ತಿಯರ ಪರಿಚಯವೂ ಇಲ್ಲಿದೆ. ಸಂಸ್ಕೃತಿ ಸಚಿವಾಲಯವು ಅಮರ ಚಿತ್ರಕಥಾ ಸಹಯೋಗದಲ್ಲಿ ಈ ಪುಸ್ತಕ ಬಿಡುಗಡೆ ಮಾಡಿದೆ. ಇದರಲ್ಲಿ ವರ್ಣರಂಜಿತ ಚಿತ್ರಗಳಿವೆ. ಹಾಗೆಯೇ ಈ ವೀರನಾರಿಯರ ಹೋರಾಟದ ವಿವರವೂ ಇದೆ.