ಉ.ಪ್ರ. ಉಗ್ರ ನಿಗ್ರಹ ದಳದ ಎಎಸ್ಪಿ ರಾಜೇಶ್ ಸಾಹಿನಿ ನಿಗೂಢ ಸಾವು
Team Udayavani, May 29, 2018, 4:43 PM IST
ಲಕ್ನೋ : ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದ (ಎಟಿಎಸ್) ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ ರಾಜೇಶ್ ಸಾಹಿನಿ ಅವರು ತಮ್ಮ ಕಚೇರಿಯಲ್ಲಿ ಇಂದು ಮಂಗಳವಾರ ನಿಗೂಢವಾಗಿ ಗುಂಡೇಟಿನಿಂದ ಸತ್ತು ಬಿದ್ದಿರುವುದು ಪತ್ತೆಯಾಗಿದೆ.
ಆದರೆ ಅನಂತರದ ವರದಿಗಳ ಪ್ರಕಾರ ರಾಜೇಶ್ ಸಾಹಿನಿ ಅವರೇ ತಮಗೆ ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿದು ಬಂದಿದೆ. ಹಾಗಿದ್ದರೂ ಅವರ ಆತ್ಮಹತ್ಯೆಯನ್ನು ಶಂಕಿಸಲಾಗಿದೆ.
ಸಾಹಿನಿ ಅವರು ಈಚೆಗಷ್ಟೇ ಉತ್ತರಾಖಂಡದಲ್ಲಿ ಪಾಕ್ ಐಎಸ್ಐ ಬೇಹುಗಾರನೊಬ್ಬನನ್ನು ಸೆರೆಹಿಡಿಯುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಸಾಹಿ° ಅವರು ಏಕೆ ಆತ್ಮಹತ್ಯೆ ಮಾಡಿಕೊಂಡರೆಂಬುದು ಇನ್ನೂ ಗೊತ್ತಾಗಬೇಕಷ್ಟೆ.