ಬೆಂಗಾವಲು ವಾಹನ ಅಡ್ಡಗಟ್ಟಿದ ಆನೆ:ಪ್ರಾಣ ಉಳಿಸಿಕೊಳ್ಳಲು ಬಂಡೆ ಏರಿದ ಮಾಜಿ ಸಿಎಂ:ವಿಡಿಯೋ ನೋಡಿ
ಸುಮಾರು ಅರ್ಧಗಂಟೆಗಳ ಕಾಲ ಬಂಡೆಕಲ್ಲು ಮೇಲೆ ನಿಂತ ಮಾಜಿ ಸಿಎಂ
Team Udayavani, Sep 15, 2022, 6:18 PM IST
ಉತ್ತರಾಖಾಂಡ್: ಇಲ್ಲಿನ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರ ಬೆಂಗಾವಲು ಪಡೆ ವಾಹನವನ್ನು ಆನೆಯೊಂದು ಅಡ್ಡಗಟ್ಟಿದ್ದು, ಇದನ್ನು ಅರಿತ ಅವರು ಪ್ರಾಣಾಪಾಯದಿಂದ ಪಾರಾಗಲು ಬಂಡೆಯೊಂದರ ಮೇಲೆ ಏರಿದ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಬಿಆರ್ಟಿಯಲ್ಲಿ ವಿಭಿನ್ನ ಪ್ರಭೇದದ ಕುಬ್ಜ ಹಲ್ಲಿ ಪತ್ತೆ! ಕೇವಲ 2.57 ಸೆಂ.ಮೀ
ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ಅವರು ಪೌರಿಯಿಂದ ಕೋಟ್ವಾರ್ಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಆನೆಯೊಂದು ಅವರ ಬೆಂಗಾವಲು ವಾಹನವನ್ನು ಅಡ್ಡಗಟ್ಟಿದೆ. ಭಯಭೀತರಾದ ಮಾಜಿ ಸಿಎಂ ಜೀವ ಉಳಿಸಿಕೊಳ್ಳಲು ಹತ್ತಿರದಲ್ಲೇ ಇದ್ದ ದೊಡ್ಡ ಬಂಡೆಯೊಂದನ್ನು ಹತ್ತಿದ್ದಾರೆ.
उत्तराखंड के पूर्व मुख्यमंत्री त्रिवेंद्र सिंह रावत के काफिले को एक हाथी ने रोक लिया। कोटद्वार की तरफ जाते समय जंगल में रास्ता रोकने के बाद हाथी बेहद आक्रामक हो गया। पूर्व सीएम ने एक चट्टान पर चढ़कर जान बचाई।#Uttarakhand #TrivendraSinghRawat pic.twitter.com/b2QFeRk61p
— Hindustan (@Live_Hindustan) September 15, 2022
ಈ ವೇಳೆ ರಸ್ತೆಯಲ್ಲಿ ನೆರೆದಿದ್ದ ಜನರನ್ನು ಗಮನಿಸಿದ ಆನೆ, ಅವರನ್ನು ಓಡಿಸಿಕೊಂಡು ಹೋಗಿದೆ. ಪ್ರಾಣ ಉಳಿಸಿಕೊಳ್ಳಲು ಜನರು ಎತ್ತರದ ಪ್ರದೇಶಗಳಿಗೆ ಓಡಿದ್ದಾರೆ, ಇದರಿಂದಾಗಿ ಆನೆಗೆ ಹಿಂಬಾಲಿಸಿಕೊಂಡು ಹೋಗಲು ಕಷ್ಟವಾಗಿ ಹಿಂದೇಟು ಹಾಕಿದೆ.
ಕಾರನ್ನು ಆನೆ ಅಡ್ಡಗಟ್ಟಿದ್ದರಿಂದ ಸಮಾರು ಅರ್ಧಗಂಟೆ ಬಂಡೆಮೇಲೆ ಉಳಿಯಬೇಕಾಯಿತು. ಆನೆಯನ್ನು ಓಡಿಸಲು ಗಾಳಿಯಲ್ಲಿ ಗುಂಡುಹಾರಿಸಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು