ದೇವಸ್ಥಾನ ಕಾಯ್ದೆ ಪ್ರಶ್ನಿಸಿದ್ದ ಸ್ವಾಮಿ ಅರ್ಜಿ ವಜಾ
Team Udayavani, Jul 22, 2020, 6:20 AM IST
ಡೆಹ್ರಾಡೂನ್: ಬದರಿನಾಥ್, ಕೇದಾರನಾಥ್ ಸೇರಿದಂತೆ 51 ದೇಗುಲಗಳ ನಿರ್ವಹಣೆ ಸಂಬಂಧ ಉತ್ತರಾಖಂಡ ಸರಕಾರ ರೂಪಿಸಿದ್ದ ದೇವಸ್ಥಾನ ಕಾಯ್ದೆ ಪ್ರಶ್ನಿಸಿ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡಿದೆ.
ದೇಗುಲ ಆಡಳಿತವನ್ನು ವೃತ್ತಿಪರಗೊಳಿಸುವ ಉದ್ದೇಶದಿಂದ ತ್ರಿವೇಂದ್ರ ಸಿಂಗ್ ರಾವತ್ ಸರಕಾರ ಈ ಕಾಯ್ದೆ ಜಾರಿ ಮಾಡಿತ್ತು.
ಸ್ವಾಮಿ ತಮ್ಮ ಅರ್ಜಿಯಲ್ಲಿ, ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಸರಕಾರಕ್ಕೆ ಯಾವುದೇ ಹಕ್ಕಿಲ್ಲ.
ಈ ಕಾಯ್ದೆ ಅಸಾಂವಿಧಾನಿಕ, ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಆಕ್ಷೇಪಿಸಿದ್ದರು.
ಹೈಕೋರ್ಟ್ ಅರ್ಜಿ ವಜಾಗೊಳಿಸುತ್ತಿದ್ದಂತೆ ಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ. ‘ಹೈಕೋರ್ಟ್ ನಲ್ಲಿ ಸೋತ ಅನಂತರ ನನ್ನ ಹಿಂದಿನ ವಿಜಯಗಳಂತೆ ನಾನು ಸುಪ್ರೀಂ ಮೆಟ್ಟಿಲನ್ನು ಏರಿ ಗೆದ್ದುಬರುವೆ’ ಎಂದು ಸವಾಲು ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ