ಉತ್ತರಾಖಂಡದಲ್ಲಿ ಮೇಘ ಸ್ಪೋಟಕ್ಕೆ 38 ಬಲಿ
Team Udayavani, Aug 18, 2019, 6:07 PM IST
ಡೆಹ್ರಾಡೂನ್: ಉತ್ತರಾಖಂಡ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಭಾರೀ ಮಳೆಗೆ ಮತ್ತು ಮಳೆಸಂಬಂಧಿತ ಪ್ರವಾಹ ಮತ್ತು ಭೂಕುಸಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಗರ್ಹವ್ವಾಲ್ ಮತ್ತು ಕುಮಾಂವ್ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಬಹುದೆಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಮೋಲಿ ಜಿಲ್ಲೆಯೊಂದರಲ್ಲೇ ಮಳೆ ಸಂಬಂಧಿತ ದುರಂತಗಳಿಗೆ 15 ಜನ ಸಾವೀಗೀಡಾಗಿದ್ದಾರೆ.
ಇಲ್ಲಿನ ಅಲಕಾನಂದ ನದಿಯು ತನ್ನ ಅಪಾಯದ ಮಟ್ಟಕ್ಕಿಂತ 30 ಅಡಿ ಎತ್ತರದಲ್ಲಿ ಹರಿಯುತ್ತಿರುವುದು ಈ ಭಾಗದಲ್ಲಿನ ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ. ಇನ್ನು ಭೂ ಕುಸಿತದ ಕಾರಣದಿಂದ ಉತ್ತರ ಕಾಶಿ – ಡೆಹ್ರಾಡೂನ್ ಹೆದ್ದಾರಿಯು ಮುಚ್ಚಲ್ಪಟ್ಟಿದೆ. ಇನ್ನು ಕೈಲಾಸ್ ಮಾನಸ ಸರೋವರ ಯಾತ್ರಾರ್ಥಿಗಳೂ ಸಹ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ರಾಜ್ಯ ವಿಪತ್ತು ನಿರ್ವಹಣಾ ದಳಗಳು ಈ ಭಾಗಲದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
Uttarakhand: Uttarkashi-Dehradun highway closed due to landslide pic.twitter.com/IfIKCZsUSl
— ANI (@ANI) August 18, 2019
ಪೌರಿ ಗರ್ಹವ್ವಾಲ್, ಚಮೋಲಿ, ಉತ್ತರಕಾಶಿ, ಮತ್ತು ರುದ್ರಪ್ರಯಾಗ್, ಪಿತೋರಾಗಢ್, ಚಂಪಾವತ್, ಭಗೇಶ್ವರ್ ಮತ್ತು ನೈನಿತಾಲ್ ಪ್ರದೇಶಗಳು ಮಳೆಯಿಂದಾಗಿ ಹೆಚ್ಚಿನ ಹಾನಿಯನ್ನು ಅನಭವಿಸಿವೆ. ಆಗಸ್ಟ್ 19ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಉತ್ತರಾಖಂಡ ಹಮಾಮಾನ ಇಲಾಖೆಯ ನಿರ್ದೇಶಕ ಬಿಕ್ರಂ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ರುದ್ರಪ್ರಯಾಗದಲ್ಲಿ ಎಲ್ಲಾ ಘಾಟ್ ಗಳೂ ನೆರೆ ನೀರಿನಲ್ಲಿ ಮುಳುಗಲ್ಪಟ್ಟಿವೆ. ಜೋಶಿ ಮಠದಿಂದ ಬದರಿನಾಥ್ ಕಡೆಗೆ ಸಾಗುವ ಯಾತ್ರಾರ್ಥಿಗಳಿಗೆ ಲಂಬಾಗರ್ ಎಂಬ ಪ್ರದೇಶದಲ್ಲಿ ಉಂಟಾಗುತ್ತಿರುವ ಭೂಕುಸಿತದಿಂದ ಆತಂಕ ಉಂಟಾಗಿದೆ. ಆದರೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ಥಳೀಯ ಆಡಳಿತವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
Uttarakhand: State Disaster Response Force (SDRF) team helps pilgrims cross damaged path on the route of Kailash Mansarovar Yatra. pic.twitter.com/AkpbjVh2tJ
— ANI (@ANI) August 18, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
MUST WATCH
ಹೊಸ ಸೇರ್ಪಡೆ
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ