ಜ್ಞಾನವಾಪಿ ನೆಲಮಾಳಿಗೆಗಳ ಸರ್ವೆ; ನವೆಂಬರ್ 2 ರಂದು ಮನವಿ ವಿಚಾರಣೆ
ಆಕ್ಷೇಪಣೆಯನ್ನು ಸಲ್ಲಿಸದಿಕ್ಕಾಗಿ ಮಸೀದಿ ಸಮಿತಿಗೆ 100 ರೂ. ದಂಡ
Team Udayavani, Oct 21, 2022, 8:27 PM IST
ವಾರಾಣಸಿ : ಇಲ್ಲಿನ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಎರಡು ನೆಲಮಾಳಿಗೆಗಳ ಸರ್ವೆಗಾಗಿ ಸಲ್ಲಿಸಿದ ಮನವಿಯ ವಿಚಾರಣೆಯನ್ನು ನವೆಂಬರ್ 2 ರಂದು ನಿಗದಿಪಡಿಸಿದೆ ಮತ್ತು ಸಮಯಕ್ಕೆ ಸರಿಯಾಗಿ ಆಕ್ಷೇಪಣೆಯನ್ನು ಸಲ್ಲಿಸದಿಕ್ಕಾಗಿ ಮಸೀದಿ ಸಮಿತಿಗೆ ದಂಡ ವಿಧಿಸಿದೆ.
ಜಿಲ್ಲಾ ಸರಿಕಾರಿ ವಕೀಲ ಮಹೇಂದ್ರ ಪಾಂಡೆ ಮಾತನಾಡಿ, ”ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದಲ್ಲಿ ಹಿಂದೂ ಪರ ಸಲ್ಲಿಸಿರುವ ಮನವಿಗೆ ನಿರಾಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯವು ಮಸೀದಿ ಸಮಿತಿಯನ್ನು ಈ ಹಿಂದೆ ಕೇಳಿತ್ತು.ಮಸೀದಿ ಕಡೆಯವರು ಯಾವುದೇ ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗಲಿಲ್ಲ, ನಂತರ ನ್ಯಾಯಾಲಯವು ಅವರಿಗೆ 100 ರೂ ದಂಡವನ್ನು ವಿಧಿಸಿತು ಮತ್ತು ವಿಚಾರಣೆಗೆ ನವೆಂಬರ್ 2 ಅನ್ನು ನಿಗದಿಪಡಿಸಿತು” ಎಂದು ಹೇಳಿದರು.
ಪ್ರಕರಣದಲ್ಲಿ ಕಕ್ಷಿದಾರರಾಗಲು ನಾಲ್ವರು ಮಾಡಿದ ಪ್ರಾರ್ಥನೆಯನ್ನು ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.ಇದಕ್ಕೂ ಮುನ್ನ ಸೋಮವಾರ ಏಳು ಮಂದಿಯ ಇದೇ ರೀತಿಯ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಪ್ರಕರಣದಲ್ಲಿ ಕಕ್ಷಿದಾರರಾಗಲು ಅರ್ಜಿ ಸಲ್ಲಿಸಿದವರಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಮಾಜಿ ಮಹಾಂತ ಕುಲಪತಿ ತಿವಾರಿ, ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ, ನೇಕಾರ ಮುಕ್ತಾರ್ ಅಹ್ಮದ್ ಅನ್ಸಾರಿ ಮತ್ತು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಜಯ್ ಕುಮಾರ್ ಶರ್ಮಾ ಸೇರಿದ್ದಾರೆ ಎಂದು ಪಾಂಡೆ ಹೇಳಿದರು.
ಕಳೆದ ಶುಕ್ರವಾರ, ಮಸೀದಿ ಆವರಣದಲ್ಲಿ ಕಂಡುಬಂದಿರುವ ಶಿವಲಿಂಗ ರೂಪದ ರಚನೆಯ ವೈಜ್ಞಾನಿಕ ತನಿಖೆ ಮತ್ತು ಕಾರ್ಬನ್ ಡೇಟಿಂಗ್ ಕೋರಿ ಹಿಂದೂ ಅರ್ಜಿದಾರರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ