ಎಂಜಿನಿಯರ್ಸ್ ಬಿರಿಯಾನಿ! ಐಟಿ ಕೆಲಸ ಬಿಟ್ಟು ಬಿರಿಯಾನಿ ಅಂಗಡಿ ತೆರೆದ ಯುವಕರು
Team Udayavani, Mar 15, 2022, 7:40 AM IST
ಹೊಸದಿಲ್ಲಿ: “ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ, ಒಂದೊಳ್ಳೆ ಐಟಿ ಕೆಲಸ ಸಿಕ್ಕಿಬಿಟ್ಟರೆ ಸಾಕು, ಲೈಫ್ ಸೆಟಲ್’ ಹೀಗೆ ಭಾವಿಸುವವರು ಹಲವರಿದ್ದಾರೆ. ಆದರೆ ಹರಿಯಾಣ ಮೂಲದ ಈ ಇಬ್ಬರು ಎಂಜಿನಿಯರ್ಗಳಿಗೆ ಕೈ ತುಂಬ ಸಂಬಳ ತಂದುಕೊಡುತ್ತಿದ್ದ ಐಟಿ ಕೆಲಸ ಬೋರ್ ಆಯಿತಂತೆ. ಅದಕ್ಕೆಂದೇ “ಇಂಜಿನಿಯರ್ಸ್ ವೆಜ್ ಬಿರಿಯಾನಿ’ ಅಂಗಡಿ ತೆರೆದು, ಎಲ್ಲರ ಗಮನ ಸೆಳೆದಿದ್ದಾರೆ.
ಸೋನಿಪತ್ನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರೋಹಿತ್ ಸೈನಿ ಮತ್ತು ವಿಶಾಲ್ ಭಾರದ್ವಾಜ್ಗೆ ಆ ಕೆಲಸದಲ್ಲಿ ತೃಪ್ತಿ ಇರಲಿಲ್ಲವಂತೆ. ಮೊದ ಲಿನಿಂದಲೂ ಅಡುಗೆ ಮಾಡುವತ್ತ ಹೆಚ್ಚು ಒಲವಿದ್ದ ರೋಹಿತ್, ಬಿರಿಯಾನಿ ಅಂಗಡಿ ತೆರೆಯುವ ಉಪಾಯ ಮಾಡಿದ್ದಾರೆ. ಅದಕ್ಕೆ ವಿಶಾಲ್ ಕೂಡ ಜತೆಯಾಗಿದ್ದಾರೆ.
ಈ ಇಬ್ಬರು ಸೇರಿಕೊಂಡು ಸೋನಿಪತ್ ರೆಸ್ಟೋರೆಂಟ್ಗಳಲ್ಲಿ ದುಬಾರಿ ಬೆಲೆಗೆ ಲಭ್ಯವಿರುವ ವಿಶೇಷ ಬಿರಿ ಯಾನಿಯನ್ನು ರಸ್ತೆ ಬದಿಯ ಅಂಗಡಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾರಂಭಿಸಿದ್ದಾರೆ. ಅದಷ್ಟೇ ಅಲ್ಲದೆ ಈ ಹಿಂದೆಯೇ ರೋಹಿತ್ ಆರಂಭಿಸಿದ್ದ “ಕುಕ್ಕಿಂಗ್ ವಿತ್ ರೋಹಿತ್’ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಕೆಲವು ರೆಸಿಪಿಗಳ ವೀಡಿಯೋಗಳನ್ನೂ ಹಂಚಿಕೊಳ್ಳಲಾರಂಭಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಪದಾಧಿಕಾರಿ ಬೆಂಕಿ;ಪ್ರಮುಖ ನಾಯಕರ ಜತೆ ಚರ್ಚಿಸದೇ ಪಟ್ಟಿ ಒಯ್ದರೇ ಡಿಕೆಶಿ ?
“ಎಂಜಿನಿಯರ್ಸ್ ವೆಜ್ ಬಿರಿಯಾನಿ’ ಹೆಸರಿನಲ್ಲೇ ನಡೆಯುತ್ತಿರುವ ಬಿರಿಯಾನಿ ಅಂಗಡಿಯಲ್ಲಿ ಅಚಾರಿ ಬಿರಿಯಾನಿ ಮತ್ತು ಗ್ರೇವಿ ಚಾಪ್ ಬಿರಿಯಾನಿ ಮಾರಾಟ ಮಾಡಲಾಗುತ್ತಿದೆ. ಅರ್ಧ ತಟ್ಟೆ ಅಚಾರಿ ಬಿರಿಯಾನಿಗೆ 30 ರೂ. ಹಾಗೂ ಪೂರ್ತಿ ತಟ್ಟೆ ಅಚಾರಿ ಬಿರಿಯಾನಿಗೆ 50 ರೂ. ನಿಗದಿ ಮಾಡಲಾಗಿದೆ. ಸೋನಿಪತ್ನ ವಿಶೇಷವಾಗಿರುವ ಗ್ರೇವಿ ಚಾಪ್ ಬಿರಿಯಾನಿಗೆ 70 ರೂ. ಇದೆ.
ಲಾಭವಿಲ್ಲ, ನೆಮ್ಮದಿಯಿದೆ: ಎಂಜಿನಿಯರ್ ಕೆಲಸ ಮಾಡುವಾಗ ಪ್ರತೀ ತಿಂಗಳು ಬ್ಯಾಂಕ್ ಖಾತೆಗೆ ಹಣ ಬಂದು ಬೀಳುತ್ತಿತ್ತು. ಆದರೆ ಇದರಲ್ಲಿ ಹಾಗಿಲ್ಲ. ಈಗಿನ್ನೂ ಆರಂಭವಾಗಿರುವ ನಮ್ಮ ಅಂಗಡಿಯಿಂದ ಲಾಭ, ನಷ್ಟ ಎರಡೂ ಆಗುತ್ತಿಲ್ಲ. ಆದರೆ ನಾವು ಐಟಿ ಕೆಲಸ ಮಾಡು ವುದಕ್ಕಿಂತ ಈಗ ನೆಮ್ಮದಿಯಾಗಿದ್ದೇವೆ ಎನ್ನುತ್ತಾರೆ ಈ ಎಂಜಿನಿಯರ್ ಜೋಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ