ಭಾರತಕ್ಕೆ ಗಡೀಪಾರು ವಿರುದ್ಧ ವಿಜಯ್ ಮಲ್ಯ ಮನವಿ ಬ್ರಿಟನ್ ಕೋರ್ಟಿನಲ್ಲಿ ತಿರಸ್ಕೃತ
Team Udayavani, Apr 8, 2019, 5:11 PM IST
ಹೊಸದಿಲ್ಲಿ : ತನ್ನನ್ನು ಭಾರತಕ್ಕೆ ಗಡೀಪಾರು ಗೊಳಿಸಬಾರದೆಂದು ಮದ್ಯ ದೊರೆ, 63ರ ಹರೆಯದ ವಿಜಯ್ ಮಲ್ಯ ಮಾಡಿಕೊಂಡಿದ್ದ ಮನವಿಯನ್ನು ಬ್ರಿಟನ್ ಕೋರ್ಟ್ ತಿರಸ್ಕರಿಸಿದೆ.
ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ವಿಜಯ್ ಮಲ್ಯ ಗೆ ಬ್ರಿಟನ್ ಕೋರ್ಟಿನ ಈ ಆದೇಶ ಆಘಾತ ಉಂಟುಮಾಡಿದೆ; ಅಂತೆಯೇ ಮಲ್ಯ ಈಗಿನ್ನು ಬೇಗನೆ ಭಾರತಕ್ಕೆ ಗಡೀಪಾರಾಗುವುದು ಖಚಿತವಾಗಿದೆ.
ವಿಜಯ್ ಮಲ್ಯ ಕಳೆದ 2016ರ ಮಾರ್ಚ್ ತಿಂಗಳಿಂದಲೂ ಬ್ರಿಟನ್ನಲ್ಲಿ ನೆಲೆಸಿದ್ದಾರೆ. 2017ರ ಎಪ್ರಿಲ್ ನಲ್ಲಿ ಸ್ಕಾಟ್ಲಂಡ್ ಯಾರ್ಡ್ ಜಾರಿಗೊಳಿಸಿದ್ದ ಗಡೀಪಾರು ವಾರಂಟ್ ವಿರುದ್ಧ ಪಡೆದು ಕೊಳ್ಳಲಾಗಿದ್ದ ಜಾಮೀನಿನ ಆಧಾರದಲ್ಲಿ ಈ ತನಕವೂ ಬ್ರಿಟನ್ನಲ್ಲೇ ಉಳಿದುಕೊಳ್ಳಲು ಮಲ್ಯಗೆ ಸಾಧ್ಯವಾಗಿತ್ತು.
ಭಾರತ ಮತ್ತು ಬ್ರಿಟನ್ 1992ರಲ್ಲಿ ಗಡೀಪಾರು ಒಪ್ಪಂದಕ್ಕೆ ಸಹಿ ಹಾಕಿದ್ದು 1993ರ ನವೆಂಬರ್ ನಿಂದ ಈ ಒಪ್ಪಂದ ಜಾರಿಯಲ್ಲಿದೆ.
ಬ್ರಿಟನ್ನಿಂದ ಭಾರತಕ್ಕೆ ಈ ವರೆಗೆ ಕೇವಲ ಒಂದೇ ಒಂದು ಗಡೀಪಾರು ಉಪಕ್ರಮ ಯಶಸ್ವಿಯಾಗಿದೆ. ಅದೆಂದರೆ ಗೋದ್ರಾ ನಂತನದಲ್ಲಿ 2002ರಲ್ಲಿ ಸಂಭವಿಸಿದ್ದ ದೊಂಬಿಯಲ್ಲಿ ಶಾಮೀಲಾಗಿದ್ದ ಆರೋಪಿ ಸಮೀರ್ಭಾಯಿ ವಿನೂಭಾಯಿ ಪಟೇಲ್ ನನ್ನು ಭಾರತದಲ್ಲಿ ತನಿಖೆ ಎದುರಿಸಲು 2016ರಲ್ಲಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ