ಮೋದಿ, ಬಿಜೆಪಿಯಲ್ಲೀಗ ಜನರಿಗೆ ವಿಶ್ವಾಸ ಉಳಿದಿಲ್ಲ : ರಾಹುಲ್ ಗಾಂಧಿ
Team Udayavani, Dec 12, 2018, 11:26 AM IST
ಹೊಸದಿಲ್ಲಿ : ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ ಜನರಿಗೆ ಪ್ರಧಾನಿ ಮೋದಿ ಅವರಲ್ಲಾಗಲೀ ಬಿಜೆಪಿಯಲ್ಲಾಗಲೀ ಈಗ ವಿಶ್ವಾಸ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ವಿಜಯ ಸಾಧಿಸಿದ್ದು ಈ ಮೂರೂ ಹಿಂದಿ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.
ಕಾಂಗ್ರೆಸ್ ಗೆ ಮೂರು ಪ್ರಮುಖ ರಾಜ್ಯಗಳಲ್ಲಿ ದೊರಕಿರುವ ಯಶಸ್ಸು 2019ರ ಲೋಕಸಭೆ ಚುನಾವಣೆಗೆ ಹೊಸ ಹುಮ್ಮಸ್ಸು, ಧೈರ್ಯವನ್ನು ತುಂಬಿದೆ. ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಿನಿಂದ ಕೈಜೋಡಿಸಿದರೆ ಬಿಜೆಪಿಯನ್ನು ಹಣಿಯಲು ಸಾಧ್ಯ ಎಂಬುದೀಗ ಸಾಬೀತಾಗಿದೆ. ಕಾಂಗ್ರೆಸ್ನ ಈ ಮಹಾ ವಿಜಯವು ದ್ವೇಷ ರಾಜಕಾರಣದ ವಿರುದ್ದ ಸಾಧಿಸಲಾಗಿರುವ ಗೆಲುವಾಗಿದೆ ಎಂದು ರಾಹುಲ್ ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.