ತ್ಯಾಜ್ಯ ಸಮಸ್ಯೆ: ನಾಳೆ ಮುಖ್ಯಮಂತ್ರಿಗಳ ಸಭೆ
Team Udayavani, Nov 14, 2017, 6:20 AM IST
ಹೊಸದಿಲ್ಲಿ /ಚಂಡೀಗಡ: ರಾಷ್ಟ್ರ ರಾಜಧಾನಿಯಲ್ಲಿ ಮಂಜು ಮುಸುಕಿದ ಧೂಳು ದಟ್ಟವಾಗಿರುವ ಸಮಸ್ಯೆ ಕೈಮೀರಿರುವಂತೆಯೇ ಬುಧವಾರ ಪಂಜಾಬ್ ಮತ್ತು ದಿಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ಈ ಅಂಶವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಖಚಿತಪಡಿಸಿದ್ದಾರೆ. ಇದಕ್ಕೂ ಮೊದಲು ಪಂಜಾಬ್ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಕೃಷಿ ತ್ಯಾಜ್ಯ ಸುಡುವುದನ್ನು ತಡೆಯಲು ದಿಲ್ಲಿ ಸರಕಾರ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಜತೆಗೆ ದಿಲ್ಲಿ ಸಿಎಂ ಜತೆ ಮಾತುಕತೆಗೂ ಸಿದ್ಧವೆಂದಿದ್ದಾರೆ.
ತುರ್ತು ಪರಿಸ್ಥಿತಿ: ಕೊಂಚ ಹೆಚ್ಚಿನ ಪ್ರಮಾಣದ ಲ್ಲಿಯೇ ಇತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇದೊಂ ದು ತುರ್ತು ಪರಿಸ್ಥಿತಿಯಂತಿದೆ ಎಂದು ಪ್ರತಿಪಾ ದಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡುವಂತೆ ಕೇಂದ್ರ, ಉ.ಪ್ರ. ಪಂಜಾಬ್ ಮತ್ತು ಹರ್ಯಾಣ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಜತೆಗೆ ಪರಿಸರಕ್ಕೆ ಪೂರಕವಾಗಿರುವ ವಿದ್ಯುತ್ ಮತ್ತು ಸೋಲಾರ್ ಶಕ್ತಿ ಆಧಾರಿತ ವಾಹನಗಳ ಬಳಕೆಗೆ ಏಕೆ ಪ್ರೋತ್ಸಾಹ ನೀಡಬಾರದು ಎಂದು ಕೋರ್ಟ್ ಪ್ರಶ್ನಿಸಿದೆ.
ಎನ್ಜಿಟಿಗೆ ಮೇಲ್ಮನವಿ: ಬೆಸ-ಸಮ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ದಿಲ್ಲಿ ಸರಕಾರ ಅಳೆದೂ ಸುರಿದು ಎನ್ಜಿಟಿಗೆ ಮನವಿ ಸಲ್ಲಿಸಿದೆ. ಅದು ಮಂಗಳವಾರ ವಿಚಾರಣೆಯಾಗಲಿದೆ. ಬೆಸ-ಸಮ ಜಾರಿಗೆ ವರ್ಷದ ಅವಧಿ ಬೇಕು ಎಂದು ಅದು ಪ್ರತಿಪಾದಿಸಿದೆ.
ಜನರ ಆಕ್ರೋಶ: ವಾಯುಮಾಲಿನ್ಯ ಮಟ್ಟ ಹೆಚ್ಚುತ್ತಿದ್ದರೂ, ಸೋಮ ವಾರ ಶಾಲೆಗಳು ತೆರೆದಿ ರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಟ್ಟ ವಾತವರಣ ಮಕ್ಕಳನ್ನು ಶಾಲೆಗೆ ಕಳುಹಿಸುವ ಪರಿಸ್ಥಿತಿ ಎದುರಾಗಿದೆ.
ಸಾಹೇಬ ಯಾಕೆ ಮೌನ?
ದಿಲ್ಲಿ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಯಾಕೆ ಮೌನ ವಹಿಸಿದ್ದಾರೆಂದು ಕಾಲೆಳೆದಿ ರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 1978ರ ಸಿನಿಮ “ಗಮನ್’ನ ಹಾಡಿನ ಸಾಲುಗಳನ್ನು ಟ್ವೀಟ್ ಮಾಡಿದ್ದಾರೆ. “ಎದೆ ಯಲ್ಲಿ ನೋವಿದೆ. ಕಣ್ಣುಗಳಲ್ಲಿ ಬಿರುಗಾಳಿ ಇದೆ. ನಗರದಲ್ಲಿ ಯಾಕೆ ಎಲ್ಲರೂ ತೊಂದರೆಗೀಡಾಗಿದ್ದಾರೆ? ಇದಕೇRನು ಹೇಳುತ್ತೀರಿ ಸಾಹೇಬ್? ಸುಮ್ಮನೇಕೆ ಇದ್ದೀರಿ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ