ರಷ್ಯಾ ಜತೆಗಿನ ಬಾಂಧವ್ಯಕ್ಕೆ ಧಕ್ಕೆ ಇಲ್ಲ: ಜೈಶಂಕರ್
Team Udayavani, Mar 25, 2022, 8:10 AM IST
ಹೊಸದಿಲ್ಲಿ/ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವುದನ್ನು ಮುಂದಿಟ್ಟು ಭಾರತವು ಆ ದೇಶದೊಂದಿಗೆ ಹೊಂದಿರುವ ಬಾಂಧವ್ಯ, ವ್ಯಾಪಾರ ವಹಿವಾಟಿಗೆ ಧಕ್ಕೆ ತರಲು ಬಯಸುತ್ತಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಜತೆಗೆ ಭಾರತ ಕೂಡ ಹಾಲಿ ಬಿಕ್ಕಟ್ಟು ಶಾಂತಿಯುತವಾಗಿ ಇತ್ಯರ್ಥವಾಗಬೇಕೆಂದು ಬಯಸುತ್ತಿದೆ ಎಂದು ಹೇಳಿದೆ.
ರಾಜ್ಯಸಭೆಯಲ್ಲಿ ಗುರುವಾರ ಲಿಖಿತ ಉತ್ತರ ನೀಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ದೇಶದ ಹಿತಾಸಕ್ತಿಯನ್ನು ಗಮನಿಸಿಯೇ ವಿದೇಶಾಂಗ ನೀತಿ ರಚಿಸಲಾಗಿದೆ. ಇತರ ರಾಷ್ಟ್ರಗಳ ಸಾರ್ವಭೌಮತೆಯನ್ನೂ ಗೌರವಿಸುತ್ತೇವೆ ಎಂದಿದ್ದಾರೆ.
ರಷ್ಯಾ ದಾಳಿಯನ್ನು ಖಂಡಿಸಲು ಭಾರತಕ್ಕೆ ಧೈರ್ಯ ಸಾಲದು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಕೆಲವು ದಿನಗಳ ಹಿಂದೆ ಟೀಕಿಸಿದ್ದಕ್ಕೆ ಪ್ರತಿಯಾಗಿ ಸಚಿವರು ಅಧಿಕೃತವಾಗಿ ಸರಕಾರದ ನಿಲುವನ್ನು ಪ್ರಕಟಿಸಿದ್ದಾರೆ.
ನಮ್ಮ ಸಮಸ್ಯೆ ಅಲ್ಲ :
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು ಭಾರತದ ಸಮಸ್ಯೆ ಅಲ್ಲ ಎಂದ ಜೈಶಂಕರ್, ಆ ಸಮಸ್ಯೆಯನ್ನು ಮುಂದಿಟ್ಟು ರಷ್ಯಾದ ಜತೆಗಿನ ಬಾಂಧವ್ಯಕ್ಕೆ ಧಕ್ಕೆ ತರಲು ಬಯಸುವುದಿಲ್ಲ. ಜತೆಗೆ ಅಮೆರಿಕದೊಂದಿಗೆ ಭಾರತ ಹೊಂದಿರುವ ವಾಣಿಜ್ಯಿಕ ಬಾಂಧವ್ಯಕ್ಕೂ ಬಿಕ್ಕಟ್ಟನ್ನೂ ಥಳಕು ಹಾಕುವ ಅಗತ್ಯವಿಲ್ಲ ಎಂದು ಹೇಳಿದರು.
ಉಕ್ರೇನ್ ಮತ್ತು ರಷ್ಯಾ ಜತೆಗೆ 6 ತತ್ವಗಳು :
ತತ್ಕ್ಷಣವೇ ಯುದ್ಧ ನಿಲ್ಲಬೇಕು ಮತ್ತು ಶಾಂತಿ ನೆಲೆಸಬೇಕು, ರಾಜತಾಂತ್ರಿಕ ಮತ್ತು ಮಾತುಕತೆ ಮೂಲಕವೇ ಬಿಕ್ಕಟ್ಟಿಗೆ ಪರಿಹಾರ, ಅಂತಾರಾಷ್ಟ್ರೀಯ ನಿಯಮಗಳಿಗೆ ಮತ್ತು ಸಾರ್ವಭೌಮತ್ವಕ್ಕೆ ಮನ್ನಣೆ, ಮಾನವೀಯತೆ ಆಧಾರದಲ್ಲಿ ಜನರ ಸ್ಥಳಾಂತರ, ಭಾರತದಿಂದಲೂ ಮಾನವೀಯ ನೆರವು ನೀಡಿಕೆ, ಬಿಕ್ಕಟ್ಟು ಪರಿಹರಿಸಲು ಉಕ್ರೇನ್ ಮತ್ತು ರಷ್ಯಾ ಜತೆಗೆ ಸತತ ಸಂಪರ್ಕ ಎಂಬ ಆರು ತತ್ವಗಳನ್ನು ಕೇಂದ್ರ ಹೊಂದಿದೆ. ಅವುಗಳ ಆಧಾರದಲ್ಲಿ ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ ಎಂದರು.
29ನೇ ದಿನಕ್ಕೆ ಯುದ್ಧ ಪ್ರವೇಶ :
ರಷ್ಯಾ-ಉಕ್ರೇನ್ ಕಾಳಗ ಆರಂಭವಾಗಿ ಗುರುವಾರಕ್ಕೆ 29 ದಿನಗಳಾಗಿವೆ. ರಷ್ಯಾ ಸೇನಾಪಡೆಗೆ ಸೇರಿದ ಯುದ್ಧನೌಕೆಯನ್ನು ಉಕ್ರೇನ್ನ ಬ್ರೆಡ್ಯಾನ್ಸ್ಕ್ ಬಂದರಿನಲ್ಲಿ ನಾಶಗೊಳಿಸಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಮತ್ತೂಂದೆಡೆ, ಬ್ರುಸೆಲ್ಸ್ನಲ್ಲಿ ನಡೆದ ನ್ಯಾಟೋ ನಾಯಕರ ಸಭೆಯಲ್ಲಿ ಐರೋಪ್ಯ ಒಕ್ಕೂಟದ ಪೂರ್ವ ಭಾಗಕ್ಕೆ 40 ಸಾವಿರ ಯೋಧರನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ, ಪುತಿನ್ ಪಡೆಯನ್ನು ಎದುರಿಸಲು ಮತ್ತಷ್ಟು ಶಸ್ತ್ರಾಸ್ತ್ರ ನೀಡುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನ್ಯಾಟೋವನ್ನು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ