ಬುರ್ಖಾ ಧರಿಸಿ ದೂರು ನೀಡಲು ಹೋದ!
Team Udayavani, Aug 18, 2019, 5:45 AM IST
ಬರೇಲಿ: ತನ್ನ ಊರಿನ ಪೊಲೀಸ್ ಇನ್ಸ್ಪೆಕ್ಟರ್ರೊಬ್ಬರೊಂದಿಗೆ ದ್ವೇಷ ಕಟ್ಟಿಕೊಂಡು ಫಜೀತಿ ಪಡುತ್ತಿರುವ ಅಕºರ್ ಅಲಿ ಎಂಬ ವ್ಯಕ್ತಿ, ಎಸ್ಐ ವಿರುದ್ಧ ಹಿರಿಯ ಇನ್ಸ್ಪೆಕ್ಟರ್ (ಎಸ್ಎಸ್ಪಿ) ಅವರಿಗೆ ದೂರು ನೀಡಲು ಬುರ್ಖಾ ಧರಿಸಿ ಅವರ ಕಚೇರಿಗೆ ಹೋಗಿ ಸುದ್ದಿಯಾಗಿದ್ದಾರೆ.
ಎಸ್ಎಸ್ಪಿಗೆ ನೀಡಿರುವ ದೂರಿನಲ್ಲಿ ಖಾನ್, “ಬರೇಲಿ ಜಿಲ್ಲೆಯ ಅವೊನಾÉ ಹಳ್ಳಿಯಲ್ಲಿನ ತನ್ನ ಮನೆಯಲ್ಲಿ ಕೆಲ ದಿನಗಳ ಹಿಂದೆ ಕಳ್ಳತನವಾಗಿತ್ತು. ಈ ಬಗ್ಗೆ ಠಾಣೆಯಲ್ಲಿ ಕೇಸು ದಾಖಲಿಸಿದರೂ, ಅಲ್ಲಿನ ಇನ್ಸ್ಪೆಕ್ಟರ್ ದೇವೇಂದ್ರ ಸಿಂಗ್, ತನಿಖೆ ನಡೆಸದೆ ಪ್ರಕರಣ ಅಂತ್ಯಗೊಳಿಸಿದ್ದರು. ಅದರ ವಿರುದ್ಧ ಸ್ಥಳೀಯ ಕೋರ್ಟ್ ಮೆಟ್ಟಿಲೇರಿದ್ದು, ದೇವೇಂದ್ರ ಅವರಿಗೆ ಕೋರ್ಟ್ ನೋಟಿಸ್ ಕಳಿಸಿತ್ತು.
ಇದರಿಂದ ಸಿಟ್ಟಾದ ದೇವೇಂದ್ರ, ತಮ್ಮ ಠಾಣೆಯಲ್ಲಿ ಖಾನ್ ವಿರುದ್ಧ ಎರಡು ದೂರು ದಾಖಲಿಸಿದ್ದಲ್ಲದೆ, ಬೇರೆ ಕೆಲವು ಪ್ರಕರಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಪಟ್ಟಿಗೆ ನನ್ನ ಹೆಸರನ್ನು ಸೇರ್ಪಡೆ ಗೊಳಿಸಿದ್ದಾರೆ ಎಂದಿದ್ದಾರೆ. ದೂರು ಆಲಿಸಿರುವ ಎಸ್ಎಸ್ಪಿ, ಇಡೀ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…