ಸ್ವದೇಶಿ ಮಹತ್ವ…ಪ್ರೆಸಿಡೆಂಟ್ ಫ್ಲೀಟ್ ರಿವ್ಯೂ ಏನಿದರ ಮಹತ್ವ?
ಫ್ಲೀಟ್ ಎಂದರೆ ನೌಕಾಪಡೆಯ ಹಡಗುಗಳ ಒಂದು ಗುಂಪಾಗಿದೆ.
Team Udayavani, Feb 22, 2022, 12:50 PM IST
ಭಾರತೀಯ ನೌಕಾ ಪಡೆ ನಡೆಸುವ ಅತ್ಯಂತ ದೊಡ್ಡ ಸಮಾರಂಭವಿದು. ಇದರಲ್ಲಿ ಮುಖ್ಯ ಅತಿಥಿಗಳೇ ರಾಷ್ಟ್ರಪತಿ ರಾಮನಾಥ ಕೋವಿಂದ್. ರಾಷ್ಟ್ರಪತಿಗಳು ಮೂರು ಪಡೆಗಳ ಮಹಾದಂಡನಾಯಕನಾಗಿರುವುದರಿಂದ ವರ್ಷಕ್ಕೊಮ್ಮೆ ಈ ದಿನ ನೌಕಾಪಡೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಾರೆ. ಹೀಗಾಗಿಯೇ ಈ ದಿನಕ್ಕೆ ಮಹತ್ವವಿದೆ.
ವಿಶಾಖಪಟ್ಟಣಕ್ಕೆ ಭೇಟಿ
ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ವಿಶಾಖಪಟ್ಟಣಕ್ಕೆ ಭೇಟಿ ನೀಡಿ ಫ್ಲೀಟ್ ಪರಿಶೀಲನೆ ನಡೆಸಿದ್ದಾರೆ. ಫ್ಲೀಟ್ ಎಂದರೆ ನೌಕಾಪಡೆಯ ಹಡಗುಗಳ ಒಂದು ಗುಂಪಾಗಿದೆ.
ಪ್ರಸಿಡೆಂಟ್ ಫ್ಲೀಟ್ ರಿವ್ಯೂ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಪ್ರಸಿಡೆನ್ಶಿಯಲ್ ಯಾಚ್ನಲ್ಲಿ ಕುಳಿತು ಭಾರತೀಯ ನೌಕಾಪಡೆಯ ಹಡಗುಗಳು ಮತ್ತಿತರ ಶಸ್ತ್ರಾಸ್ತ್ರಗಳ ಪರಿಶೀಲನೆ ಮಾಡುತ್ತಾರೆ. ಈ ಫ್ಲೀಟ್ನಲ್ಲಿ 60 ಹಡಗುಗಳು ಮತ್ತು ಸಬ್ಮೆರಿನ್ಗಳು, 55 ಯುದ್ಧ ವಿಮಾನಗಳು ಇವೆ. ಪ್ರತೀ ವರ್ಷವೂ ಒಂದೊಂದು ನೌಕಾದಳದ ನೆಲೆಯಲ್ಲಿ ಈ ಪ್ರಸಿಡೆನ್ಶಿಯಲ್ ಫ್ಲೀಟ್ ರಿವ್ಯೂ ನಡೆಸಲಾಗುತ್ತದೆ. ಈ ಬಾರಿ ವಿಶಾಖಪಟ್ಟಣಕ್ಕೆ ಒಲಿದಿದೆ.
ಹೊಸ ಶಸ್ತ್ರಾಸ್ತ್ರಗಳ ಪ್ರದರ್ಶನ
ಈ ಫ್ಲೀಟ್ ರಿವ್ಯೂ ವೇಳೆ ಮುಂದೆ ನೌಕಾಪಡೆಗೆ ಸೇರಲಿರುವ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಸ್ವದೇಶಿ ಮಹತ್ವ
ಈ ಬಾರಿಯ ಫ್ಲೀಟ್ನಲ್ಲಿ ಪ್ರದರ್ಶನವಾಗುತ್ತಿರುವ 60 ಸಮರನೌಕೆ ಮತ್ತು ಸಬ್ಮೆರಿನ್ಗಳಲ್ಲಿ 47 ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ ಎಂದು ನೌಕಾಪಡೆ ಹೇಳಿದೆ. ಅಷ್ಟೇ ಅಲ್ಲ, ಪ್ರಸಿಡೆನ್ಶಿಯಲ್ ಯಾಚ್ ಅನ್ನೂ ದೇಶೀಯವಾಗಿ ನಿರ್ಮಾಣ ಮಾಡಲಾಗಿದೆ ಎಂಬುದು ವಿಶೇಷ.
ಇದುವರೆಗೆ ಎಷ್ಟು ರಿವ್ಯೂ?
ಮೊದಲ ಬಾರಿಗೆ 1953ರಲ್ಲಿ ಪ್ರಸಿಡೆಂಟ್ ಫ್ಲೀಟ್ ರಿವ್ಯೂ ನಡೆಸಲಾಗಿತ್ತು. ಆಗ ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರಪತಿಯಾಗಿದ್ದರು. ಇದುವರೆಗೆ ಒಟ್ಟು 11 ಫ್ಲೀಟ್ ರಿವ್ಯೂ ನಡೆಸಲಾಗಿದೆ. 2001 ಮತ್ತು 2016ರಲ್ಲಿ ವಿದೇಶಿ ನೌಕೆಗಳೂ ಭಾಗಿಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?