ವಿಶಾಖಪಟ್ಟಣಂ ಫ್ಯಾಕ್ಟರಿಯಲ್ಲಿ ಸೋರಿಕೆಯಾಗಿದ್ದು ಡೆಡ್ಲಿ ಸ್ಟೈರಿನ್ ಅನಿಲ…ಏನಿದು ಗೊತ್ತಾ?
ಎಲ್ ಜಿ ಪಾಲಿಮರ್ಸ್ ಘಟಕದಲ್ಲಿ ಪ್ಲಾಸ್ಟಿಕ್ ಮತ್ತು ರಬ್ಬರ್ ತಯಾರಿಸಲು ಸ್ಟೈರಿನ್ ಅನಿಲ ಬಳಸುತ್ತಾರೆ.
Team Udayavani, May 7, 2020, 3:38 PM IST
ಮಣಿಪಾಲ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ವೈಜಾಗ್ ನಲ್ಲಿ ಎಲ್ ಜಿ ಪಾಲಿಮರ್ಸ್ ಘಟಕದಲ್ಲಿ ಅನಿಲ ಸೋರಿಕೆಯಿಂದ ದೊಡ್ಡ ದುರಂತ ಸಂಭವಿಸಿದೆ. ಈ ಘಟಕದಲ್ಲಿ ವಿಷಾನಿಲ ಸ್ಟೈರಿನ್ (Styrene)ಅನಿಲ ಸೋರಿಕೆಯಾಗಿದೆ. ಈ ಅನಿಲ ಯಾವುದಕ್ಕೆ ಬಳಸುತ್ತಾರೆ, ಇದು ಎಷ್ಟೊಂದು ಅಪಾಯಕಾರಿ ಎಂಬ ಸಂಕ್ತಿಪ್ತ ವಿವರ ಓದಿ…
ಎಲ್ ಜಿ ಪಾಲಿಮರ್ಸ್ ಪ್ಲ್ಯಾಂಟ್ ನಲ್ಲಿ ವಿದ್ಯುತ್ ಫ್ಯಾನ್ ಬ್ಲೇಡ್ಸ್, ಕಪ್ಸ್ ಹಾಗೂ ಮೇಕಪ್ ಗೆ ಬೇಕಾಗುವ ಉತ್ಪನ್ನಗಳನ್ನು ತಯಾರಿಸುತ್ತಾರೆ. ಈ ಉತ್ಪನ್ನ ತಯಾರಿಸಲು ಪ್ಲ್ಯಾಂಟ್ ನಲ್ಲಿ ಸ್ಟಿರಿನ್ ಬಳಸುತ್ತಾರೆ. ಸ್ಟೈರಿನ್ ಸುಲಭವಾಗಿ ಹೊತ್ತಿ ಉರಿಯಬಲ್ಲ ಹಾಗೂ ಬೆಂಕಿ ಹಿಡಿದ ನಂತರ ಈ ಅನಿಲ ಅಪಾಯಕಾರಿ ವಿಷಾನಿಲವಾಗುತ್ತದೆ ಎಂದು ವರದಿ ವಿವರಿಸಿದೆ.
ಎಲ್ ಜಿ ಪಾಲಿಮರ್ಸ್ ಘಟಕದಲ್ಲಿ ಪ್ಲಾಸ್ಟಿಕ್ ಮತ್ತು ರಬ್ಬರ್ ತಯಾರಿಸಲು ಸ್ಟೈರಿನ್ ಅನಿಲ ಬಳಸುತ್ತಾರೆ. ಫೈಬರ್ ಗ್ಲಾಸ್, ಪ್ಲಾಸ್ಟಿಕ್ ಕೊಳವೆ, ವಾಹನ ಭಾಗಗಳು, ಪ್ಲಾಸ್ಟಿಕ್ ಕುಡಿಯುವ ನೀರಿನ ಕಪ್ ಉತ್ಪಾದಿಸಲು ಈ ಸ್ಟೈರಿನ್ ಬಳಸುತ್ತಾರೆ. ಸ್ಟೈರಿನ್ ಬಣ್ಣರಹಿತವಾದ ದ್ರವವಾಗಿದೆ. ಇದು ಶೀಘ್ರವಾಗಿ ಆವಿಯಾಗುವ ಗುಣಹೊಂದಿದ್ದು, ಎಣ್ಣೆಯುಕ್ತ ದ್ರವರೂಪದಲ್ಲಿರುತ್ತದೆ.
ಸ್ಟೈರಿನ್ ಅನಿಲ ಎಷ್ಟು ಅಪಾಯಕಾರಿ ಗೊತ್ತಾ?
ಸ್ಟೈರಿನ್ ಅನಿಲ ಮನುಷ್ಯ ಹಾಗೂ ಪ್ರಾಣಿಗಳ ಮೇಲೆ ತೀವ್ರ ತರದ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ. ಸ್ಟೈರಿನ್ ಅನಿಲದಿಂದ ಮನುಷ್ಯನ ಮೂತ್ರಪಿಂಡ, ಉಸಿರಾಟದ ತೊಂದರೆಗೆ ಕೂಡಲೇ ಕಾರಣವಾಗುತ್ತದೆ. ತಲೆನೋವು, ನಿಶ್ಯಕ್ತಿ, ವಾಂತಿ ಆರಂಭಗೊಳ್ಳುತ್ತದೆ. ಈ ಅನಿಲದ ಸಂಪರ್ಕಕ್ಕೆ ಬಂದ ಕೂಡಲ ಮನುಷ್ಯ, ಪ್ರಾಣಿ, ಪಕ್ಷಿ, ಹಾವುಗಳು ಸಾಯುತ್ತದೆ. ಮನುಷ್ಯನ ಜಠರ, ಶ್ವಾಸಕೋಶದ, ತಲೆಕೂದಲು ಉದುರುವುದು, ಮಾನಸಿಕ ಒತ್ತಡ, ನರಮಂಡಲದ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತದೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ