ಹೊಸ ಪ್ರೈವೇಸಿ ಪಾಲಿಸಿ ಕೈಬಿಡಿ: ವಾಟ್ಸ್ಯಾಪ್ಗೆ ಕೇಂದ್ರ ವಾರ್ನಿಂಗ್
Team Udayavani, Jan 19, 2021, 11:00 PM IST
ನವದೆಹಲಿ: ಭಾರತೀಯ ಬಳಕೆದಾರರಿಗೆ ಗೌಪ್ಯತಾ ನೀತಿಯಲ್ಲಿ (ಪ್ರೈವೇಸಿ ಪಾಲಿಸಿ) ಬದಲಾವಣೆ ಹೇರಲು ಮುಂದಾಗಿರುವ ವಾಟ್ಸ್ಆ್ಯಪ್ಗೆ ಕೇಂದ್ರ ಸರ್ಕಾರ ಬಿಗ್ಶಾಕ್ ನೀಡಿದೆ. ಪಾಲಿಸಿಯಲ್ಲಿನ ಎಲ್ಲ ಹೊಸ ಬದಲಾವಣೆಗಳನ್ನು ಕೂಡಲೇ ವಾಪಸ್ ತೆಗೆದುಕೊಳ್ಳುವಂತೆ ಖಡಕ್ಕಾಗಿ ಸೂಚಿಸಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ಸಂಬಂಧ ವಾಟ್ಸ್ ಆ್ಯಪ್ ಸಿಇಒ ವಿಲ್ ಕ್ಯಾಥ್ಕಾರ್ಟ್ಗೆ ಕಟುಶಬ್ದಗಳಲ್ಲಿ ಪತ್ರಬರೆದು, “ಭಾರತಕ್ಕೊಂದು ನೀತಿ ಯುರೋಪ್ ದೇಶಗಳಿಗೊಂದು ನೀತಿ ಏಕೆ?’ ಎಂದು ಖಾರವಾಗಿ ಪ್ರಶ್ನಿಸಿದೆ.
“ವಾಟ್ಸಾéಪ್ನ ನೂತನ ನೀತಿಗಳು ಭಾರತೀಯರ ನಾಗರಿಕರ ಆಯ್ಕೆ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಕಾರಣಕ್ಕಾಗಿ ವಿವಾದಿತ ನೀತಿಗಳನ್ನು ಕೈಬಿಡಬೇಕು’ ಎಂದು ಸೂಚಿಸಿದೆ.
“ಯುರೋಪ್ ಒಕ್ಕೂಟಗಳಲ್ಲಿನ ವಾಟ್ಸ್ಯಾಪ್ ಪಾಲಿಸಿ ನೀತಿಗೂ, ಭಾರತದಲ್ಲಿನ ಉದ್ದೇಶಿತ ನೀತಿಗಳಿಗೂ ಸಾಕಷ್ಟು ವ್ಯತ್ಯಾಸ ಗಮನಕ್ಕೆ ಬಂದಿದೆ. ಭಾರತದ ಬಳಕೆದಾರರ ಹಿತಾಸಕ್ತಿಗಳನ್ನು ಗೌರವಿಸದೆ, ವಿವಾದಿತ ನೀತಿಗಳ ಮೂಲಕ ವಾಟ್ಸಾಪ್ ತಾರತಮ್ಯ ಎಸಗಿದೆ’ ಎಂದು ಆರೋಪಿಸಿದೆ.
14 ಪ್ರಶ್ನೆಗಳು!: “ಭಾರತೀಯ ನಾಗರಿಕರ ಹಿತಾಸಕ್ತಿ ರಕ್ಷಿಸುವುದು ಸರ್ಕಾರದ ಸಾರ್ವಭೌಮ ಹಕ್ಕು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಇದನ್ನು ವಾಟ್ಸಾಪ್ ಗಂಭೀರವಾಗಿ ಪರಿಗಣಿಸಬೇಕು’ ಎಂದೂ ಎಚ್ಚರಿಸಿದೆ. ಅಲ್ಲದೆ, ಡೇಟಾ ಸುರಕ್ಷತೆ ಕುರಿತು ಎದ್ದಿರುವ 14 ಪ್ರಶ್ನೆಗಳಿಗೆ ಶೀಘ್ರವೇ ಉತ್ತರಿಸುವಂತೆಯೂ ಸರ್ಕಾರ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ