ದೆಹಲಿ ದಂಗೆ: ಮುಸ್ಲಿಂ ಬಂಧುಗಳ ಮನೆಯಲ್ಲಿ ಸಪ್ತಪದಿ ತುಳಿದ ಹಿಂದೂ ಯುವತಿ
Team Udayavani, Feb 27, 2020, 10:10 PM IST
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಹೋರಾಟದ ಹಿನ್ನಲೆಯಲ್ಲಿ ಉತ್ತರ ದೆಹಲಿ ಭಾಗದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಸಂದರ್ಭದಲ್ಲಿ ನಡೆದ ಸೌಹಾರ್ಧ ವಿವಾಹವೊಂದು ಇದೀಗ ಸುದ್ದಿಯಲ್ಲಿದೆ.
ಇಲ್ಲಿನ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದ 23 ವರ್ಷ ಪ್ರಾಯದ ಸಾವಿತ್ರಿ ಎಂಬ ಯುವತಿಯ ವಿವಾಹ ನಿಗದಿಯಾಗಿತ್ತು. ಹೊಸ ಜೀವನಕ್ಕೆ ಪ್ರವೇಶಿಸುವ ಕನಸು ಕಾಣುತ್ತಿದ್ದ ಸಾವಿತ್ರಿಗೆ ಬರಸಿಡಿಲಂತೆ ಬಂದೆರಗಿದ್ದು ದೆಹಲಿ ಹಿಂಸಾಚಾರ. ಮದುವೆ ನಡೆಯಬೇಕಿದ್ದ ಪ್ರದೇಶದಲ್ಲೇ ಹಿಂಸಾಚಾರ ಭುಗಿಲೆದ್ದ ಕಾರಣ ಸಾವಿತ್ರಿ ಮದುವೆಯನ್ನು ಮುಂದೂಡಲೇಬೇಕಾದ ಅನಿವಾರ್ಯತೆ ಸಾವಿತ್ರಿ ಕುಟುಂಬದವರದ್ದಾಯಿತು.
ಆದರೆ ವಿಚಿತ್ರವೆಂಬಂತೆ ತಮ್ಮ ನೆರೆ ಮನೆಯ ಯುವತಿಯ ಮದುವೆಯೊಂದು ಗಲಭೆಗಳ ಕಾರಣಕ್ಕೆ ಮುಂದೂಡಬೇಕಾದ ಅನಿವಾರ್ಯತೆಯನ್ನು ಕಂಡ ಆ ಪ್ರದೇಶದ ಮುಸ್ಲಿಂ ಬಾಂಧವರು ಸಾವಿತ್ರಿ ತಂದೆಯಲ್ಲಿ ಮಾತನಾಡಿ ತಮ್ಮದೇ ಮನೆಯಲ್ಲಿ ಆಕೆಯ ಮದುವೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್