ಮುಸ್ಲಿಮರನ್ನು ಪ್ರತಿನಿಧಿಸಲು AIMPLB ಆಯ್ಕೆ ಮಾಡಿದ್ದು ಯಾರು ?
Team Udayavani, Dec 28, 2017, 7:21 PM IST
ಹೊಸದಿಲ್ಲಿ : ತ್ರಿವಳಿ ತಲಾಕ್ ಮಸೂದೆಯನ್ನು ವಿರೋಧಿಸುತ್ತಿರುವ ಅಖೀಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿಗೆ ಮುಸ್ಲಿಮರನ್ನು ಪ್ರತಿನಿಧಿಸುವ ಹಕ್ಕನ್ನು ಕೊಟ್ಟವರು ಯಾರು ? ಎಂದು ಕೇಂದ್ರ ಸಹಾಯಕ ವಿದೇಶ ವ್ಯವಹಾರಗಳ ಸಚಿವ ಎಂ ಜೆ ಅಕ್ಬರ್ ಅವರಿಂದು ಲೋಕಸಭೆಯಲ್ಲಿ ಪ್ರಶ್ನಿಸಿದರು.
ಮುಸ್ಲಿಂ ಖಾಸಗಿ ಕಾನೂನು ಮಂಡಳಿಯ ಸ್ಥಾನಮಾನ ಏನು ? ಮುಸ್ಲಿಂ ಸಮುದಾಯದವರನ್ನು ಪ್ರತಿನಿಧಿಸುವುದಕ್ಕೆ ಅದನ್ನು ಆಯ್ಕೆಮಾಡಿದವರು ಯಾರು ? ಎಂದು ಎಂ ಜೆ ಅಕ್ಬರ್ ಅವರಿಂದು ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಹೇಳಿದರು.
ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಅಕ್ಬರ್, ಪ್ರಸ್ತಾವಿತ ಮಸೂದೆಯು ತಲಾಕ್ ವಿರೋಧಿ ಅಲ್ಲ; ಕುರಾನ್ ಹೇಳುವುದೇನೆಂದರೆ ಮಹಿಳೆಯರಿಗೆ ಕೊಡಬೇಕಾದ ಹಕ್ಕನ್ನು ಕೊಡಬೇಕು ಮತ್ತು ಅದಕ್ಕಿಂತಲೂ ಹೆಚ್ಚನ್ನು ಕೊಡಬೇಕು ಎಂಬುದಾಗಿದೆ ಎಂದು ಹೇಳಿದರು.
ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಅನ್ನು ಉಲ್ಲೇಖೀಸಿ ಮಾತನಾಡಿದ ಅಕ್ಬರ್, “ದೇವರ ಹೆಸರಲ್ಲಿ ಮಹಿಳೆಯರ ಮೇಲೆ ಎಂದೂ ದೌರ್ಜನ್ಯ ನಡೆಯ ಕೂಡದು ಎಂದು ಕುರಾನ್ ಹೇಳುತ್ತದೆ; ಆದರೆ ಕಳೆದ 1,400 ವರ್ಷಗಳಿಂದಲೂ ನಡೆಯುತ್ತಿರುವ ಈ ಕ್ರೌರ್ಯವನ್ನು ಕೆಲವು ಜಾಹಿಲ್ (ಅಜ್ಞಾನಿ) ಪುರುಷರು ಈಗಲೂ ಮಾಡುತ್ತಿದ್ದಾರೆ’ ಎಂದು ಹೇಳಿದರು.
ತ್ರಿವಳಿ ತಲಾಕನ್ನು ಅಪರಾಧೀಕರಿಸುವ 2017ರ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆಯನ್ನು ಕೇಂದ್ರ ಸರಕಾರ ಹಿಂದೆಗೆದುಕೊಳ್ಳಬೇಕು ಎಂದು ಎಐಎಂಪಿಎಲ್ಬಿ ಒತ್ತಾಯಿಸುತ್ತಿದೆ. ಈ ಸಂಘಟನೆಯ ಪ್ರಕಾರ ಈ ಪ್ರಸ್ತಾವಿತ ಮಸೂದೆಯು ಮುಸ್ಲಿಮರ ಮಹಿಳಾ ಕಲ್ಯಾಣದ ವಿರೋಧಿಯಾಗಿದೆ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಕುಟುಂಬದ ಹಿತಾಸಕ್ತಿಗೆ ವಿರುದ್ಧವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!