ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ
Team Udayavani, Jan 24, 2022, 7:20 AM IST
ಹೊಸದಿಲ್ಲಿ: ನೇತಾಜಿಯವರ ಸಾವಿನ ರಹಸ್ಯವನ್ನು ಕೇಂದ್ರ ಸರಕಾರ ಸದ್ಯದಲ್ಲೇ ಬಯಲು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ದಿಲ್ಲಿಯ ಇಂಡಿಯಾ ಗೇಟ್ ಬಳಿ, ನೂತನವಾಗಿ ನಿರ್ಮಿಸಲಾಗಿರುವ ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಹಾಲೋಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದ ಅನಂತರ ಅವರು ಮಾತನಾಡಿದರು. ನೇತಾಜಿಯವರ ಸಾವಿನ ಹಿಂದಿನ ರಹಸ್ಯವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾರ್ಯೋನ್ಮುಖವಾಗಿದೆ. ಸದ್ಯದಲ್ಲೇ ಅದರ ವರದಿಯನ್ನು ಅಧಿಕೃತವಾಗಿ ಪ್ರಕಟಿಸ ಲಾಗುತ್ತದೆ ಎಂದು ಮೋದಿ ತಿಳಿಸಿದರು.
ಬೋಸ್ ಪ್ರಬಂಧನ್ ಪುರಸ್ಕಾರ ಪ್ರದಾನ: ಇದೇ ವೇಳೆ, “ಸುಭಾಷ್ ಚಂದ್ರ ಬೋಸ್ ಆಪಾª ಪ್ರಬಂಧನ್ ಪುರಸ್ಕಾರ್’ ಪ್ರಶಸ್ತಿಗಳನ್ನು ಪ್ರಧಾನಿ ಮೋದಿ ಪ್ರದಾನ ಮಾಡಿದರು. ವಿಪತ್ತು ನಿರ್ವಹಣ ಕ್ಷೇತ್ರದಲ್ಲಿ ವೀರೋಚಿತ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಮೀಸಲಿರಿಸ ಲಾಗಿದೆ. ಈ ಪ್ರಶಸ್ತಿಯು ತಲಾ 51 ಲಕ್ಷ ರೂ.ಗಳನ್ನು ಒಳಗೊಂಡಿದೆ.
ಅಂಬೇಡ್ಕರ್ ಹೆಸರಿನಲ್ಲಿ 5 ಪುಣ್ಯ ಕ್ಷೇತ್ರ: “ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ರವರ ಸ್ಮಾರಕಗೊಳಗೊಂಡ 5 ಪುಣ್ಯಕ್ಷೇತ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಗುಜರಾತ್ನಲ್ಲಿ ನಿರ್ಮಿಸಲಾಗಿರುವ ಸರ್ದಾರ್ ಪಟೇಲರ ಪುತ್ಥಳಿಯು ಏಕತಾ ಪ್ರತಿಮೆಯಾಗಿ ಸರ್ವರನ್ನೂ ಆಕರ್ಷಿಸಿದೆ. ನಾವು ದ್ವೀಪವೊಂದಕ್ಕೆ ಬೋಸ್ ಹೆಸರನ್ನಿಟ್ಟಿದ್ದೇವೆ. ಅಲ್ಲಿ ಅವರದ್ದೊಂದು ಸ್ಮಾರಕವನ್ನೂ ಲೋಕಾರ್ಪಣೆ ಮಾಡಲಾಗಿದೆ. ಇದು, ಬೋಸ್ ಅವರೊಬ್ಬರಿಗೆ ಮಾತ್ರ ಸಂದ ಗೌರವವಲ್ಲ, ಅವರು ಕಟ್ಟಿದ ಇಂಡಿಯನ್ ನ್ಯಾಶನಲ್ ಆರ್ಮಿಯ ಎಲ್ಲ ಸೇನಾನಿಗಳಿಗೆ ಸಂದ ಗೌರವವಾಗಿದೆ’ ಎಂದು ಮೋದಿ ತಿಳಿಸಿದರು.
ಚಿತಾಭಸ್ಮ ಡಿಎನ್ಎ ಟೆಸ್ಟ್ಗೆ ಸಿಕ್ಕಿತ್ತೇ ಅನುಮತಿ?
ಕೋಲ್ಕತಾ: ಟೋಕಿಯೊದ ಬೌದ್ಧ ಧರ್ಮೀಯರ ಪ್ರಾರ್ಥನಾ ಕೇಂದ್ರ ರೆಂಕೋಜಿ ಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರದ್ದು ಎನ್ನಲಾಗಿರುವ ಚಿತಾಭಸ್ಮದ ಡಿಎನ್ಎ ಪರೀಕ್ಷೆಗೆ ಅನುಮತಿ ಲಭ್ಯವಾಗಿತ್ತು. ಆದರೆ ಮುಖರ್ಜಿ ಆಯೋ ಗವು ಅದನ್ನು ನಿರ್ಲ ಕ್ಷಿ ಸಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಈ ಬಗ್ಗೆ ಆ ಪ್ರಾರ್ಥನಾ ಕೇಂದ್ರದಲ್ಲಿ 2005ರಲ್ಲಿ ಮುಖ್ಯ ಗುರುಗಳಾಗಿದ್ದ ನಿಚಿಕೋ ಮುಚಿಝುಕಿ ಅವರು 2005ರಲ್ಲಿ ನ್ಯಾ| ಎಂ.ಕೆ.ಮುಖರ್ಜಿ ನೇತೃತ್ವದ ಆಯೋಗಕ್ಕೆ ಲಿಖಿತ ಅನುಮತಿ ನೀಡಿದ್ದರು ಎಂದು ಗೊತ್ತಾಗಿದೆ. ಜಪಾನಿ ಭಾಷೆಯಲ್ಲಿದ್ದ ಈ ಪತ್ರವನ್ನು ಇತ್ತೀಚೆಗೆ ಆಂಗ್ಲ ಭಾಷೆಗೆ ತರ್ಜುಮೆಗೊಳಿಸಿದಾಗ ಈ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋಸ್ ಅವರ ಮರಿ ಮೊಮ್ಮಗಳು ಮಾಧುರಿ ಬೋಸ್, ಪತ್ರದ ಮರು ತರ್ಜುಮೆ ವೇಳೆ ಹಲವು ಅಂಶಗಳು ವರದಿಯಲ್ಲಿ ಪ್ರಸ್ತಾವಗೊಳ್ಳದೇ ಇದ್ದದ್ದೂ ಅರಿವಿಗೆ ಬಂದಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ