ಮೊಬೈಲ್ನಲ್ಲೇ ಪತಿಯ ಮೇಲೆ ಪತ್ನಿ ಬೇಹುಗಾರಿಕೆ
Team Udayavani, Aug 6, 2018, 9:55 AM IST
ತಿರುವನಂತಪುರ: ತನ್ನ ಗೆಳತಿಯೊಬ್ಬರ ಗಂಡನ ಮೇಲೆ “ಆ್ಯಪ್ ಬಿಟ್ಟು’ ಗೂಢಚಾರಿಕೆ ಮಾಡಿದ ಆರೋಪದ ಮೇಲೆ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಬಂಧಿಸಲಾಗಿದೆ. ಗೆಳತಿಯ ಸಹಾಯದಿಂದ ಆಕೆಯ ಗಂಡನ ಮೊಬೈಲ್ನಲ್ಲಿ ಟ್ರ್ಯಾಕ್ವ್ಯೂ ಎಂಬ ಆ್ಯಪ್ ಅನ್ನು ಡೌನ್ಲೋಡ್ ಮಾಡಿಸಿ ಆತನ ಎಲ್ಲಾ ಚಲನವಲನಗಳನ್ನೂ ಸಂಗ್ರಹಿ ಸ ಲಾಗಿದೆ. ಅಲ್ಲದೆ ಆತನ ಬೇಹು ಮಾಡಲು ಇದೇ ಆ್ಯಪ್ ಅನ್ನೇ ಬಳಸಿಕೊಳ್ಳಲಾಗಿದೆ. ಈ ಸಂಬಂಧ ಅಜಿತ್ ಎಂಬಾತನನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈತ ತನ್ನ ಸ್ನೇಹಿತೆ ಶೃತಿ ಅವರ ಸಹಾಯ ಪಡೆದು, ಆಕೆಯ ಪತಿ ಅದ್ವೆ„ತ್ ಮೊಬೈಲ್ನಲ್ಲಿ ಈ ಆ್ಯಪ್ ಹಾಕಿಸಿದ್ದ. ಆದರೆ, ಶ್ರುತಿ ಮತ್ತು ಅದ್ವೆ„ತ್ ನಡುವಿನ ಸಂಬಂಧ ಸರಿ ಇರಲಿಲ್ಲ. ಹಣದ ವಿಚಾರದಲ್ಲಿ ಅಸಮಾ ಧಾನ ಭುಗಿಲೆದ್ದಿದ್ದು ಆಕೆ 15 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಆದರೆ, ಇದಾದ ಮೇಲೂ ಅದ್ವೆ„ತ್ ಎಲ್ಲಿ ಹೋಗುತ್ತಾರೆ, ಏನು ತಿನ್ನುತ್ತಾರೆ, ಇದರ ಜತೆಯಲ್ಲೇ ಬೆಡ್ರೂಂನಲ್ಲೇ ಏನು ಮಾಡುತ್ತಾರೆ ಎಂಬ ಬಗ್ಗೆ ಶೃತಿ ಹೇಳುತ್ತಿದ್ದರು. ಇದರಿಂದ ಅನುಮಾನ ಗೊಂಡಿದ್ದ ಅದ್ವೆ„ತ್ ತಮ್ಮ ಫ್ಲ್ಯಾಟ್ನಲ್ಲಿ ರಹಸ್ಯ ಕ್ಯಾಮೆರಾಗಳಿರಬಹುದೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದರು. ಕಡೆಗೆ ಐಟಿ ತಜ್ಞರೊಬ್ಬರಿಗೆ ಮೊಬೈಲ್ ಕೊಟ್ಟು ಪರಿಶೀ ಲನೆ ಮಾಡಿಸಿದಾಗ ಈ ಘಟನೆ ಬೆಳಕಿಗೆ ಬಂ ದಿದೆ. ಕಳೆದ ಮಾರ್ಚ್ನಿಂದಲೇ ಈ ಟ್ರ್ಯಾಕ್ ನಡೆಯುತ್ತಿತ್ತು ಎಂದು ಅದ್ವೆ„ತ್ ಹೇಳಿದ್ದಾರೆ.
ಟ್ರ್ಯಾಕ್ವ್ಯೂ ಒಂದು ಮೊಬೈಲ್ ಸೆಕ್ಯು ರಿಟಿ ಸಿಸ್ಟಮ್ ಆಗಿದ್ದು, ಇದರಲ್ಲಿ ಲೋಕೇಶನ್ ಟ್ರ್ಯಾಕಿಂಗ್, ವೀಡಿಯೋ ಮತ್ತು ಆಡಿಯೋ ಮೂಲಕ ನಿಗಾ ಇಡ ಬಹುದಾಗಿದೆ. ಅಲ್ಲದೆ, ನೈಜ ಸಮಯದಲ್ಲೇ ಅಲರ್ಟ್ ಪಡೆಯಬಹುದಾಗಿದ್ದು, ಇನ್ನೊಂದು ಮೊಬೈಲ್ ಮೂಲಕವೇ ಆಪರೇಟ್ ಕೂಡ ಮಾಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
RCB: ಈ ಸಲ ಕಪ್ ನಮ್ಮದು…