ಮುಷ್ಕರ ಹಿಂದೆಗೆತಕ್ಕೆ CMಗೆ ರಾಜಸ್ಥಾನ ಹೈಕೋರ್ಟ್ ವಕೀಲರ ಶರತ್ತು
Team Udayavani, Jun 18, 2018, 4:23 PM IST
ಜೋಧ್ಪುರ : ಉದಯಪುರದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಪರಿಗಣಿಸಲು ಸಮಿತಿಯೊಂದನ್ನು ರೂಪಿಸುವುದಿಲ್ಲ ಎಂಬ ಭರವಸೆಯನ್ನು ಮುಖ್ಯಮಂತ್ರಿ ವಿಜಯರಾಜೇ ಸಿಂಧಿಯಾ ಅವರು ತಮಗೆ ಕೊಟ್ಟಲ್ಲಿ ತಾವು ತಮ್ಮ ಮುಷ್ಕರವನ್ನು ಹಿಂಪಡೆಯುವುದಾಗಿ ರಾಜಸ್ಥಾನ ಹೈಕೋರ್ಟ್ ವಕೀಲರು ಇಂದು ಹೇಳಿದ್ದಾರೆ.
ಉದಯಪುರದಲ್ಲಿ ಹೈಕೋರ್ಟಿನ Circuit ಪೀಠವನ್ನುಸ್ಥಾಪಿಸಬೇಕೆಂಬ ಉದಯಪುರ ವಕೀಲರ ಬೇಡಿಕೆಯನ್ನು ಪರಿಗಣಿಸಲು ರಾಜ್ಯ ಕಾನೂನು ಸಚಿವ ಪುಷ್ಪೇಂದ್ರ ಸಿಂಗ್ ರಾಣಾವತ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರೂಪಿಸುವಂತೆ ಮುಖ್ಯಮಂತ್ರಿ ರಾಜೆ ಅವರು ಅಧಿಕಾರಿಗಳಿಗೆ ಕಳೆದ ಮೇ 19ರಂದು ಸೂಚಿಸಿದ್ದರು.
ಇದನ್ನು ಪ್ರತಿಭಟಿಸಿ ಜೋಧ್ಪುರ ವಕೀಲರು ಕಳೆದ ಮೇ 21ರಿಂದ ಮುಷ್ಕರ ನಿರತರಾಗಿದ್ದಾರೆ. ಮೊನ್ನೆ ಶನಿವಾರ ಜೋಧ್ಪುರ ವಕೀಲರ ನಿಯೋಗದೊಂದಿಗೆ ಮಾತನಾಡುತ್ತಾ ಸಿಎಂ ರಾಜೇ ಅವರು ಈ ತನಕ ಯಾವುದೇ ಸಮಿತಿಯನ್ನು ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ