ಒಂದೋ ನನ್ನ ಪತ್ರಕ್ಕೆ ಪ್ರತಿಕ್ರಿಯಿಸಿ ಇಲ್ಲದಿದ್ರೆ ಅನುಮತಿ ಇಲ್ಲದೇ ಕರ್ತಾಪುರಕ್ಕೆ ಹೋಗ್ತೇನೆ

ಕರ್ತಾಪುರ ಕಾರಿಡಾರ್ ಉದ್ಘಾಟನಾ ವಿಚಾರ ವಿದೇಶಾಂಗ ಸಚಿವಾಲಯ ಮತ್ತು ಕೇಂದ್ರ ಸರಕಾರದ ವಿರುದ್ಧ ಸಿಧು ಗುಡುಗು

Team Udayavani, Nov 7, 2019, 6:30 PM IST

Navjot-Singh-Sidhu-1-726

ಚಂಢೀಗಢ: ಕರ್ತಾಪುರದಲ್ಲಿರುವ ಐತಿಹಾಸಿಕ ಗುರುದ್ವಾರ ಸಾಹೀಬ್ ಗೆ ಭೇಟಿ ನೀಡಲು ಪಾಕಿಸ್ಥಾನಕ್ಕೆ ಹೋಗಲು ಸಿದ್ಧವಾಗಿರುವ ಕಾಂಗ್ರೆಸ್ ನಾಯಕ ಮತ್ತು ಮಾಜೀ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಇದೀಗ ಕೇಂದ್ರ ಸರಕಾರದ ವಿರುದ್ಧ ಗರಂ ಆಗಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಪಾಕಿಸ್ಥಾನದಲ್ಲಿರುವ ಕರ್ತಾಪುರಕ್ಕೆ ತೆರಳಲು ಅನುಮತಿ ಕೋರಿ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಸಿಧು ಬರೆದಿರುವ ಎರಡೆರಡು ಪತ್ರಗಳಿಗೆ ಇದುವರೆಗೆ ಅಲ್ಲಿಂದ ಪ್ರತಿಕ್ರಿಯೆ ಲಭಿಸದೇ ಇರುವುದು ಸಿಧು ಅವರ ಸಿಟ್ಟಿಗೆ ಕಾರಣವಾಗಿದೆ. ಈ ಕುರಿತಾಗಿ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಮತ್ತೊಂದು ಪತ್ರ ಬರೆದಿರುವ ಸಿಧು ಅವರು ಈ ವಿಚಾರದಲ್ಲಿ ಸರಕಾರ ತನ್ನ ನಿರ್ಧಾರವನ್ನು ಖಚಿತವಾಗಿ ತಿಳಿಸುವಂತೆ ಆಗ್ರಹಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಧು ಅವರಿಗೆ ಪಾಕಿಸ್ಥಾನ ಸರಕಾರ ಗುರುವಾರದಂದು ವೀಸಾ ಮಂಜೂರು ಮಾಡಿತ್ತು. ಕರ್ತಾಪುರ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಧು ಅವರಿಗೆ ಅನುಮತಿ ನೀಡುವ ವಿಚಾರದಲ್ಲಿ ವಿದೇಶಾಂಗ ಇಲಾಖೆ ಇದುವರೆಗೂ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಸಿಧು ಬರೆದಿರುವ ಪತ್ರಕ್ಕೆ ವಿದೇಶಾಂಗ ಇಲಾಖೆಯ ಕಡೆಯಿಂದ ಎಸ್ ಅಥವಾ ನೋ ಎಂಬ ಉತ್ತರ ಲಭಿಸಿದೇ ಇರುವುದು ಕೇಂದ್ರ ಸರಕಾರದ ವಿರುದ್ಧ ಸಿಧು ಸಿಟ್ಟಿಗೆ ಕಾರಣವಾಗಿದೆ.

ಈ ಕುರಿತಾಗ ಮಾಧ್ಯಮದವರ ಮುಂದೆ ಮಾತನಾಡಿದ ಸಿಧು ಅವರು, ‘ನನ್ನ ಪತ್ರಕ್ಕೆ ಪ್ರತಿಕ್ರಿಯಿಸುವಲ್ಲಿ ತೋರಲಾಗುತ್ತಿರುವ ವಿಳಂಬ ನೀತಿ ಅಥವಾ ಪ್ರತಿಕ್ರಿಯೆ ನೀಡದಿರುವುದು ಈ ವಿಚಾರದಲ್ಲಿ ನನ್ನ ಮುಂದಿನ ನಡೆಯನ್ನು ನಿರ್ಧರಿಸಲು ಅಡ್ಡಿಯಾಗಿದೆ. ಒಂದು ವೇಳೆ ನಾನು ಅಲ್ಲಿಗೆ ತೆರಳುವುದಕ್ಕೆ ಕೇಂದ್ರ ಸರಕಾರ ‘ನೋ’ ಎಂದರೆ ಈ ದೇಶದ ಕಾನೂನನ್ನು ಪಾಲಿಸುವ ಒಬ್ಬ ಪ್ರಜೆಯಾಗಿ ನಾನು ಸರಕಾರದ ನಿರ್ಧಾರವನ್ನು ಗೌರವಿಸುತ್ತೇನೆ ಮತ್ತು ನಾನು ಕರ್ತಾಪುರಕ್ಕೆ ಹೋಗುವುದಿಲ್ಲ’ ಎಂದು ಹೇಳಿದ್ದಾರೆ.

‘ಆದರೆ ಒಂದುವೇಳೆ ಸರಕಾರ ನನ್ನ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಹೋದಲ್ಲಿ ಮಾತ್ರ ಲಕ್ಷಾಂತರ ಸಿಖ್ಖರು ತಮ್ಮ ಅರ್ಹ ವೀಸಾದಡಿಯಲ್ಲಿ ಕರ್ತಾಪುರಕ್ಕೆ ಹೋಗುವಂತೆ ನಾನೂ ಹೋಗುತ್ತೇನೆ’ ಎಂದು ಸಿಧು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಕರ್ತಾಪುರ ಕಾರಿಡಾರ್ ಉದ್ಘಾಟನೆಗೆ ಇನ್ನೂ ಎರಡು ದಿನಗಳು ಬಾಕಿ ಇರುವಂತೆ ಸಿಧು ಅವರು ವಿದೇಶಾಂಗ ಸಚಿವಾಲಯಕ್ಕೆ ತಮ್ಮ ಮೂರನೇ ಪತ್ರವನ್ನು ಬರೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಪ್ರತಿಕ್ರಿಯೆಯನ್ನು ನೀಡಿರುವ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಅವರು, ‘ಇದೊಂದು ಐತಿಹಾಸಿಕ ಸಂದರ್ಭವಾಗಿರುವುದರಿಂದ ಇಲ್ಲಿ ವ್ಯಕ್ತಿಯೊಬ್ಬರಿಗೆ (ಸಿಧು) ಸಂಬಂಧಿಸಿದ ಪ್ರಕರಣವನ್ನು ಚರ್ಚಿಸುವುದು ಸೂಕ್ತವಲ್ಲ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Ad

ಟಾಪ್ ನ್ಯೂಸ್

Rehabilitation not required in all land acquisition cases: Supreme Court

Supreme Court: ಎಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಅಗತ್ಯವಿಲ್ಲ

Belthangady; ಪಿಲ್ಯ ಪರಿಸರದಲ್ಲಿ ನಾಯಿ ಮೇಲೆ ಚಿರತೆ ದಾಳಿ; ಗ್ರಾಮಸ್ಥರಲ್ಲಿ ಆತಂಕ

Belthangady; ಪಿಲ್ಯ ಪರಿಸರದಲ್ಲಿ ನಾಯಿ ಮೇಲೆ ಚಿರತೆ ದಾಳಿ; ಗ್ರಾಮಸ್ಥರಲ್ಲಿ ಆತಂಕ

Gunjan Arya assumed office as the new Superintendent of Police of Dharwad District

Dharwad ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಗುಂಜನ್ ಆರ್ಯ ಅಧಿಕಾರ ಸ್ವೀಕಾರ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

Subhanshu’s contribution to India’s space future: A new chapter in space exploration

ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ ಶುಭಾಂಶು ಕೊಡುಗೆ: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rehabilitation not required in all land acquisition cases: Supreme Court

Supreme Court: ಎಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಅಗತ್ಯವಿಲ್ಲ

Pune Porsche case: Accused is considered a juvenile

Pune Porsche case: ಆರೋಪಿ ಬಾಲಕ ಎಂದೇ ಪರಿಗಣನೆ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂ*ದು ಆತ್ಮಹ*ತ್ಯೆಗೆ ಶರಣಾದ ಕೇರಳದ ಮಹಿಳೆ

Nimisha Priya ನಾಳೆ ನಡೆಯಬೇಕಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಮುಂದೂಡಿಕೆ

Nimisha Priya: ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಮುಂದೂಡಿಕೆ… ವರದಿ

Fauja Singh: 114ವರ್ಷದ ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ರಸ್ತೆ ಅಪಘಾತದಲ್ಲಿ ನಿಧನ

Fauja Singh: 114ವರ್ಷದ ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ರಸ್ತೆ ಅಪಘಾತದಲ್ಲಿ ನಿಧನ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Fraud Case ಬ್ರಹ್ಮಾವರ: ಖಾತೆಯ ಹಣ ವರ್ಗಾಯಿಸಿ ವಂಚನೆ

Fraud Case ಬ್ರಹ್ಮಾವರ: ಖಾತೆಯ ಹಣ ವರ್ಗಾಯಿಸಿ ವಂಚನೆ

Rehabilitation not required in all land acquisition cases: Supreme Court

Supreme Court: ಎಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಅಗತ್ಯವಿಲ್ಲ

14-lotus

Environment: ಪ್ರಕೃತಿಯ ಪೋಷಣೆಗೆ ನಾವೆಲ್ಲರೂ ಪಾಲುದಾರರು

Roti Kapda Aur Makaan fame actor Dheeraj Kumar passes away

Dheeraj Kumar: ರೋಟಿ ಕಪಡಾ ಔರ್‌ ಮಖಾನ್‌ ಖ್ಯಾತಿಯ ನಟ ಧೀರಜ್‌ ಕುಮಾರ್‌ ನಿಧನ

13-plant

Environment: ಹಸುರು ಕಾಯ್ದರೆ ಉಸಿರು ಉಳಿಯುವುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.