ಕಲಾಪಗಳ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವ್ಯವಸ್ಥೆ: ಸುಪ್ರೀಂಕೋರ್ಟ್
ಇಂದಿನಿಂದ ಯೂಟ್ಯೂಬ್ ಮೂಲಕ ಕಲಾಪ ನೇರ ಪ್ರಸಾರ
Team Udayavani, Sep 27, 2022, 6:50 AM IST
ನವದೆಹಲಿ: ಪ್ರಕರಣಗಳ ವಿಚಾರಣೆಯ ನೇರ ಪ್ರಸಾರಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತನ್ನದೇ ಆಗಿರುವ ವ್ಯವಸ್ಥೆಯನ್ನು ಹೊಂದಲಿದೆ. ಸದ್ಯ ಯೂಟ್ಯೂಬ್ನಲ್ಲಿ ಪ್ರಸಾರವಾಗಲಿದ್ದು, ಅದೇನಿದ್ದರೂ ತಾತ್ಕಾಲಿಕ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಹೇಳಿದ್ದಾರೆ. ಮಂಗಳವಾರದಿಂದಲೇ ಕಲಾಪಗಳ ನೇರ ಪ್ರಸಾರ ಶುರುವಾಗಲಿದೆ.
ಬಿಜೆಪಿ ಮಾಜಿ ನಾಯಕ ಕೆ.ಎನ್.ಗೋವಿಂದಾಚಾರ್ಯ ಅವರ ಪರ ನ್ಯಾಯವಾದಿ ವಿರಾಗ್ ಗುಪ್ತಾ ಸಂವಿಧಾನ ಪೀಠಕ್ಕೆ ಸಂಬಂಧಿಸಿದ ಪ್ರಕರಣಗಳ ನೇರ ಪ್ರಸಾರದ ವ್ಯವಸ್ಥೆಯ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದು ಅರಿಕೆ ಮಾಡಿದ ವೇಳೆ ನ್ಯಾಯಪೀಠ ಈ ವಿಚಾರ ತಿಳಿಸಿದೆ.
ಖಾಸಗಿ ವ್ಯಾಪ್ತಿಯಲ್ಲಿ ಇರುವ ಯುಟ್ಯೂಬ್ಗ ಸುಪ್ರೀಂಕೋರ್ಟ್ ಹೊಂದಿರುವ ಕೃತಿಸ್ವಾಮಿತ್ವವನ್ನು ಒಪ್ಪಿಸಿಕೊಳ್ಳುವಂಥ ಪರಿಸ್ಥಿತಿ ಬರಬಾರದು ಎಂದು ನ್ಯಾಯವಾದಿ ವಿರಾಗ್ ಗುಪ್ತಾ ಪ್ರತಿಪಾದಿಸಿದರು.
ಅದಕ್ಕೆ ಉತ್ತರಿಸಿದ ಸಿಜೆಐ ಲಲಿತ್ ನೇತೃತ್ವದ ನ್ಯಾಯಪೀಠ “ಯೂಟ್ಯೂಬ್ ಮೂಲಕ ಪ್ರಸಾರದ ವ್ಯವಸ್ಥೆ ಕೇವಲ ತಾತ್ಕಾಲಿಕ.
ಶೀಘ್ರದಲ್ಲಿಯೇ ನೇರ ಪ್ರಸಾರಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತನ್ನದೇ ಆದ ವ್ಯವಸ್ಥೆ ಹೊಂದಲಿದೆ. ಕೃತಿಸ್ವಾಮಿತ್ವ ವಿಚಾರದ ಬಗ್ಗೆ ಗಮನ ಹರಿಸಲಿದ್ದೇವೆ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ