ತಮಿಳು ನಾಡಿನ 3 ಖಾಲಿ ವಿಧಾನಸಭಾ ಕ್ಷೇತ್ರಗಳಿಗೆ ಬೇಗನೆ ಉಪ ಚುನಾವಣೆ
Team Udayavani, Mar 28, 2019, 12:52 PM IST
ಹೊಸದಿಲ್ಲಿ : ಖಾಲಿ ಬಿದ್ದಿರುವ ತಮಿಳುನಾಡಿನ ತಿರುಪರಣಕುಂದ್ರಂ, ಒತ್ತಾಪಿದಾರಂ ಮತ್ತು ಅರವಕುರುಚ್ಚಿ ವಿಧಾನಸಭಾ ಸ್ಥಾನಗಳಿಗೆ ತಾನು ನ್ಯಾಯೋಚಿತ ಕಾಲಮಿತಿಯೊಳಗೆ ಉಪ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಇಂದು ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಖಾಲಿ ಬಿದ್ದಿರುವ ತಮಿಳು ನಾಡಿನ ಈ ಮೂರು ಸೀಟುಗಳಿಗೆ ಆದಷ್ಟು ಬೇಗನೆ ಉಪ ಚುನಾವಣೆ ನಡೆಸವಂತೆ ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶ ನೀಡಬೇಕೆಂದು ಕೋರಿ ಡಿಎಂಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ಜಸ್ಟಿಸ್ ಎಸ್ ಎ ಬೋಬಡೆ ಮತ್ತು ಎಸ್ ಎ ನಜೀರ್ ಅವರನ್ನು ಒಳಗೊಂಡ ಸುಪ್ರೀಂ ಪೀಠದ ಮುಂದೆ ಬಂದಾಗ ಚುನಾವಣಾ ಆಯೋಗವನ್ನು ಪ್ರತಿನಿಧಿಸಿ ಹಾಜರಿದ್ದ ವಕೀಲರು, ನ್ಯಾಯೋಚಿತ ಕಾಲಮಿತಿಯೊಳಗೆ ಉಪ ಚುನಾವಣೆ ನಡೆಸಲಾಗುವುದು ಎಂದು ಕೋರ್ಟಿಗೆ ತಿಳಿಸಿದರು.