ಅಪ್ರಚೋದಿತ ದಾಳಿಗೆ ಉತ್ತರಿಸುವ ಹಕ್ಕು ನಮ್ಮ ಸೈನಿಕರಿಗೆ: ನಿರ್ಮಲಾ
Team Udayavani, Jun 5, 2018, 4:41 PM IST
ಹೊಸದಿಲ್ಲಿ : ಪಾಕಿಸ್ಥಾನದೊಂದಿಗೆ ಒಪ್ಪಿಕೊಂಡ ಪ್ರಕಾರ ರಮ್ಜಾನ್ ಕದನ ವಿರಾಮಕ್ಕೆ ಭಾರತ ಬದ್ಧವಿದೆ; ಆದರೆ ನಮ್ಮ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆದಲ್ಲಿ ಅದಕ್ಕೆ ತಕ್ಕುದಾದ ಉತ್ತರವನ್ನು ನೀಡುವ ಹಕ್ಕನ್ನು ನಾವು ನಮ್ಮ ಸೈನಿಕರಿಗೆ ನೀಡಿದ್ದೇವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಸ್ಲಾಮಾಬಾದಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ನಮ್ಮ ಗಡಿಗಳನ್ನು ಕಾಯುವುದು ನಮ್ಮ ಕರ್ತವ್ಯ ಮತ್ತು ನಾವದನ್ನು ಸದಾ ಮಾಡುತ್ತಿರುತ್ತೇವೆ. ನಮ್ಮ ಮೇಲೆ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆದಾಗ ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ; ಅದಕ್ಕೆ ತಕ್ಕುದಾದ ಉತ್ತರವನ್ನು ನಾವು ನೀಡಿಯೇ ತೀರುತ್ತೇವೆ ಎಂದು ಸೀತಾರಾಮನ್ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
ಗಡಿಯಲ್ಲಿ ಕದನ ವಿರಾಮ ಏರ್ಪಡುವುದು ಬಹಳ ಮುಖ್ಯ.ಆದರೆ ಉಗ್ರ ದಾಳಿ ನಡೆದಾಗ ನಾವು ಸುಮ್ಮನಿರಲಾರೆವು. ಹಾಗೆಯೇ ನಮ್ಮ ವಿರುದ್ಧ ಉಗ್ರ ಕೃತ್ಯ ನಡೆಯುವ ತನಕ ಮಾತುಕತೆಯನ್ನು ನಡೆಸುವ ಪ್ರಶ್ನೆಯೇ ಇಲ್ಲ. ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆಗೆ ಜತೆಜತೆಗೆ ಸಾಗಲಾರದು ಎಂದು ಸಚಿವೆ ಸೀತಾರಾಮನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ