“ಚಳಿಗಾಲ ಅಧಿವೇಶನ ಅತಿ ಕಡಿಮೆ ಫಲಪ್ರದ’
Team Udayavani, Jan 11, 2019, 12:30 AM IST
ಹೊಸದಿಲ್ಲಿ: ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ ಕಲಾಪಗಳು ಶೇ. 47ರಷ್ಟು ಫಲಪ್ರದವಾಗಿದ್ದರೆ, ರಾಜ್ಯಸಭೆಯ ಕಲಾಪಗಳು ಶೇ. 27ರಷ್ಟು ಫಲದಾಯಕವಾಗಿದ್ದವು ಎಂದು ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್ ತೋಮರ್ ಗುರುವಾರ ತಿಳಿಸಿದ್ದಾರೆ. ಇವುಗಳಲ್ಲಿ ಸಾಮಾನ್ಯ ವರ್ಗಕ್ಕೆ ಶೇ. 10ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯು ಲೋಕಸಭೆ, ರಾಜ್ಯಗಳಲ್ಲಿ ಅಂಗೀಕಾರಗೊಂಡಿದ್ದು ವಿಶೇಷ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಲೋಕಸಭೆ 29 ದಿನಗಳ ಕಾಲ 17 ಸಿಟ್ಟಿಂಗ್ಗಳನ್ನು ನಡೆಸಿದ್ದರೆ, ರಾಜ್ಯಸಭೆ 30 ದಿನಗಳಲ್ಲಿ 18 ಸಿಟ್ಟಿಂಗ್ಗಳನ್ನು ನಡೆಸಿದೆ. ಲೋಕಸಭೆಯಲ್ಲಿ 12, ರಾಜ್ಯಸಭೆ ಯಲ್ಲಿ 5 ವಿಧೇಯಕಗಳನ್ನು ಮಂಡಿಸಲಾಗಿದೆ. 5 ವಿಧೇಯಕಗಳನ್ನು ಅಂಗೀಕರಿಸಿವೆ. ರಾಜ್ಯ ಸಭೆಯಿಂದ 4 ವಿಧೇಯಕಗಳನ್ನು ಹಿಂಪಡೆ ಯಲಾಗಿದೆ. ಇದು 16ನೇ ಲೋಕಸಭೆಯ ಅವಧಿಯಲ್ಲೇ ಅತಿ ಕಡಿಮೆ ಫಲಪ್ರದ ಅಧಿವೇಶನ ವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ