ದಿಲ್ಲಿ ಜನರೇ ಕಣ್ಣೀರು ಒರೆಸಿಕೊಳ್ಳಿ! ಈರುಳ್ಳಿಗೆ ಅಗ್ಗದ ಬೆಲೆ ನಿಗದಿಪಡಿಸಿದ “ಆಪ್”
Team Udayavani, Sep 27, 2019, 7:07 PM IST
ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಆ್ಯಪಲ್ ಗಿಂತ ಈರುಳ್ಳಿ ಬೆಲೆಯೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯ ಆಪ್ ನೇತೃತ್ವದ ಸರಕಾರ ಇದೀಗ ಕಡಿಮೆ ಬೆಲೆಯಲ್ಲಿ ಈರುಳ್ಳಿ ಜನರ ಕೈಗೆಟುಕುವ ನಿರ್ಧಾರಕ್ಕೆ ಮುಂದಾಗಿದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಹೇಳಿದ್ದಿಷ್ಟು: ಮಿತಿಮೀರಿ ಏರಿಕೆಯಾಗುತ್ತಿರುವ ಈರುಳ್ಳಿ ಬೆಲೆಯಿಂದ ಜನರಿಗೆ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ದಿಲ್ಲಿಯಲ್ಲಿ 70 ಮೊಬೈಲ್ ವ್ಯಾನ್ ಗಳು ಹಾಗೂ 400 ರೇಷನ್ ಅಂಗಡಿಗಳಲ್ಲಿ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ನಾಳೆಯಿಂದ ದಿಲ್ಲಿಯಲ್ಲಿ ಸರಕಾರವೇ ಈರುಳ್ಳಿಯನ್ನು ಕೆಜಿಗೆ 24 ರೂಪಾಯಿಯಂತೆ ಮಾರಾಟ ಮಾಡಲಿದೆ. ಕಡಿಮೆ ಬೆಲೆಯ ಈರುಳ್ಳಿಯನ್ನು 70 ಮೊಬೈಲ್ ವ್ಯಾನ್ ಗಳಲ್ಲಿ ಹಾಗೂ 400 ರೇಷನ್ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕೇಜ್ರಿವಾಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಈರುಳ್ಳಿ ಖರೀದಿ ನಿಮ್ಮ ಜೇಬಿಗೆ ಹೊರೆಯಾಗಬಾರದು ಮತ್ತು ಅದು ನಿಮ್ಮ ಕಣ್ಣಿಂದ ನೀರು ತರಿಸಬಾರದು ಎಂಬುದಾಗಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ