ತವರಿಗೆ ಹೋಗ ಬಯಸಿದ ಪತ್ನಿಯನ್ನು ಕಡಿದುಕೊಂದ ಪತಿರಾಯ
Team Udayavani, May 18, 2018, 11:49 AM IST
ಝಲವಾರ್, ರಾಜಸ್ಥಾನ : ತವರಿಗೆ ಹೋಗಲು ಬಯಸಿದ 45ರ ಹರೆಯದ ಹೆಂಡತಿಯೊಂದಿಗೆ ಜಗಳವಾಡಿದ ಪತಿಯೋರ್ವ, ಆಕೆ ತನ್ನಿಬ್ಬರು ಪುತ್ರಿಯರೊಂದಿಗೆ ನಿದ್ರಿಸಿಕೊಂಡಿದ್ದಾಗ ಆಕೆಯನ್ನು ಹರಿತವಾದ ಆಯುಧದಿಂದ ಕಡಿದು ಕೊಂದಿರುವ ಅತ್ಯಮಾನುಷ ಘಟನೆ ರಾಜಸ್ಥಾನದ ಝಲವಾರ್ ಜಿಲ್ಲೆಯ ಖೇರಖೇಡ ಗ್ರಾಮದಿಂದ ವರದಿಯಾಗಿದೆ.
ಪತ್ನಿ ಗುಡ್ಡಿ ಕನ್ವರ್ ರಜಪೂತ್ ಳನ್ನು ಕಳೆದ ಬುಧವಾರ ರಾತ್ರಿ ಕಡಿದು ಕೊಂದಿರುವ 48 ವರ್ಷದ ಪತಿ, ಚೈನ್ ಸಿಂಗ್ ಎಂಬಾತ ಕೊಲೆ ಕೃತ್ಯಕ್ಕೆ ಬಳಸಿದ ಕುಠಾರಿಯ ಸಹಿತ ಪರಾರಿಯಾಗಿದ್ದು ಆತನಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಬುಧವಾರ ಮಧ್ಯಾಹ್ನ ಪತ್ನಿ ಗುಡ್ಡಿ ಕನ್ವರ್ ತನ್ನ ತವರು ಮನೆಗೆ ಹೋಗಲು ತಾನು ಬಯಸಿರುವುದಾಗಿ ಪತಿಗೆ ಹೇಳಿದ್ದಳು. ಈ ವಿಷಯದಲ್ಲಿ ಆಕೆಯೊಂದಿಗೆ ಪತಿ ಚೈನ್ ಸಿಂಗ್ ಜಗಳ ತೆಗೆದ. ಅಂದು ರಾತ್ರಿ ತನ್ನ ಇಬ್ಬರು ಪುತ್ರಿಯರೊಂದಿಗೆ ಮಲಗಿಕೊಂಡಿದ್ದ ಪತ್ನಿಯನ್ನು ಆತ ನಿರ್ದಯವಾಗಿ ಕಡಿದು ಕೊಂದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಮಹಿಳೆಯ ಶವವನ್ನು ಪೊಲೀಸರು ಆಕೆಯ ಮನೆಯವರಿಗೆ ಬಿಟ್ಟುಕೊಟ್ಟಿದ್ದಾರೆ ಮತ್ತು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ