ಪರೀಕ್ಷೆ ವೇಳೆ ಕಾಲುಂಗುರ ತೆಗೆಸಿದ್ದಕ್ಕೆ ಸಚಿವೆಗೆ ಪತ್ರ
Team Udayavani, Jun 30, 2017, 3:15 AM IST
ಹೊಸದಿಲ್ಲಿ: ಸರಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆಯಲು ರೀಟಾ ವರ್ಮಾ ಎಂಬ ವಿವಾಹಿತ ಮಹಿಳೆ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ ವೇಳೆ, ಕಾಲುಂಗುರ ಸೇರಿ ಎಲ್ಲಾ ಆಭರಣಗಳನ್ನೂ ಪರೀಕ್ಷಾ ಅಧಿಕಾರಿ ತೆಗೆಸಿದ್ದಾರೆ. ಇದರಿಂದ ತಮಗೆ ಅವಮಾನವಾಗಿದೆ ಎಂದು ಆರೋಪಿಸಿ ವರ್ಮಾ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಕ್ರಮ ಜರುಗಿಸುವಂತೆ ಮೇನಕಾ ಅವರು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ಗೆ ಮನವಿ ಮಾಡಿದ್ದಾರೆ. ದೆಹಲಿ ಸಬ್ಆರ್ಡಿನೇಟ್ ಸೇವೆಗಳ ಆಯ್ಕೆ ಮಂಡಳಿಯ ಪರೀಕ್ಷೆಗೆ ತೆರಳಿದ್ದಾಗ ಕಾಲುಂಗುರ, ಬಳೆ, ಕಿವಿ ಓಲೆಯನ್ನು ತೆಗೆದಿಟ್ಟು ಹೋಗುವಂತೆ ಹೇಳಲಾಗಿತ್ತು.