ಶಿವನನ್ನೇ ಮದುವೆ ಆಗೋಕೆ ಹೊರಟ ನಾರಿ! ಉ. ಪ್ರದೇಶದ ಹರ್ಮಿಂದರ್ ಕೌರ್ ಎಂಬ ಯುವತಿಯ ಹಠ!
Team Udayavani, Jun 4, 2022, 6:55 AM IST
ಪಿತ್ತೋರ್ಗಢ: ಗುಜರಾತ್ನ ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಲು ಹೊರಟಿರುವ ವಿಚಾರ ಸುದ್ದಿಯಾದ ಬೆನ್ನಲ್ಲೇ ಇದೀಗ ದೇವ ಶಿವನನ್ನೇ ಮದುವೆಯಾಗುತ್ತೇನೆ ಎನ್ನುತ್ತಿರುವ ಇನ್ನೋರ್ವ ಯುವತಿಯ ಸುದ್ದಿ ಹೊರಬಿದ್ದಿದೆ.
ಈಕೆಯ ಹೆಸರು, ಹರ್ಮಿಂದರ್ ಕೌರ್. ಉತ್ತರ ಪ್ರದೇಶದ ಲಕ್ನೋ ಅಲಿಗಂಜ್ ಪ್ರಾಂತ್ಯದವಳು. ಈಕೆ ಉತ್ತರಾಖಂಡದ ಪಿಥೋರ್ಗಢ ಜಿಲ್ಲೆಯಲ್ಲಿರುವ, ಕೈಲಾಸ ಮಾನಸ ಸರೋವರಕ್ಕೆ ಹೋಗುವ ಮಾರ್ಗದಲ್ಲಿನ ಗಂಜಿ ಗ್ರಾಮಕ್ಕೆ ತನ್ನ ತಾಯಿಯೊಂದಿಗೆ ಇತ್ತೀಚೆಗೆ ಆಗಮಿಸಿದ್ದಳು.
ಇಲ್ಲಿ ಎಲ್ಲರಿಗೂ ಬೇಕೆಂದಾಗ ಆಗಮಿಸಲು ಅವಕಾಶವಿಲ್ಲ. ಹಾಗಾಗಿ, ಜಿಲ್ಲಾಡಳಿತದಿಂದ ಅನುಮತಿ ಪಡೆದು ಈಕೆ ಗಂಜಿ ಗ್ರಾಮಕ್ಕೆ 15 ದಿನಗಳ ಮಟ್ಟಿಗೆ ತೆರಳಿದ್ದಳು. ಅಲ್ಲಿಂದ ನೇರವಾಗಿ ಭಾರತ-ನೇಪಾಳ ಗಡಿಯಲ್ಲಿರುವ ನಿಷೇಧಿತ ಸ್ಥಳವಾದ ನಾಭಿಧಂಗ್ಗೆ ಹೋಗಿದ್ದಾಳೆ. ಅವಳಿಗೆ ನೀಡಲಾಗಿದ್ದ ಅನುಮತಿ ಮೇ 25ರಂದೇ ಕೊನೆಯಾಗಿದೆಯಾದರೂ ಆಕೆ ಅಲ್ಲಿಂದ ಮರಳಿಲ್ಲ.
ಹಾಗಾಗಿ, ಆಕೆಯನ್ನು ಅಲ್ಲಿಂದ ಕರೆತರಲೆಂದು ಪೊಲೀಸರ ತಂಡ ಹೋದಾಗ ಆಕೆ, ತಾನು ಪಾರ್ವತಿಯ ಅವತಾರವೆಂದೂ ಹಾಗೂ ಕೈಲಾಸ ಪರ್ವತದಲ್ಲಿರುವ ಶಿವನನ್ನು ವರಿಸುವುದಾಗಿ ತಿಳಿಸಿದ್ದಾಳೆ. ಕರೆದೊಯ್ಯಲು ಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ಬೆದರಿಸಿದ್ದಾಳೆ.
ಸದ್ಯಕ್ಕೆ ಪೊಲೀಸರ ತಂಡ ವಾಪಸು ಬಂದಿದ್ದು, ಸದ್ಯದಲ್ಲೇ 12 ಸಿಬ್ಬಂದಿಯಿರುವ ದೊಡ್ಡ ತಂಡವನ್ನು ಕಳುಹಿಸಿ ಆಕೆಯನ್ನು ವಾಪಸು ಕರೆತರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ