ನಾಯಿ ಸಾಕುವುದು ಬೇಡ ಎಂದು ಹೇಳಿದ್ದಕ್ಕೆ ಆತ್ಮಹತ್ಯೆ
Team Udayavani, Nov 1, 2019, 10:34 PM IST
ಚೆನ್ನೈ: “ಸೀಸರ್ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’- ಹೀಗೆಂದು ಕವಿತಾ ಎಂಬುವರು ಪ್ರೀತಿಯ ನಾಯಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ಆ ಮಹಿಳೆಯ ಕುಟುಂಬ ಸದಸ್ಯರು ನಾಯಿಯನ್ನು ಮನೆಯಲ್ಲಿ ಸಾಕುವುದು ಬೇಡ ಎಂದು ಹೇಳಿದ್ದಕ್ಕೆ ನೊಂದು ಪತ್ರ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕವಿತಾ ಎಂಬುವರು ನಾಯಿಯನ್ನು ಮನೆಗೆ ತಂದಿದ್ದರು. ಅದಕ್ಕೆ ಅವರು ಸೀಸರ್ ಎಂಬ ಹೆಸರನ್ನೂ ಇರಿಸಿದ್ದರು. ಪೊಲೀಸ್ ಅಧಿಕಾರಿಯಾಗಿದ್ದ ಕವಿತಾರ ತಂದೆಗೆ ನಾಯಿಯನ್ನು ಮನಗೆ ತಂದದ್ದು ಮತ್ತು ಅದಕ್ಕೆ ಹೆಸರು ಇರಿಸಿದ್ದು ಇಷ್ಟವಿರಲಿಲ್ಲ. ಅದನ್ನು ನಗರದಿಂದ ಆಚೆ ಬಿಟ್ಟು ಬರುವಂತೆ ಪದೇ ಪದೆ ಒತ್ತಾಯಿಸುತ್ತಿದ್ದರು. ಹೀಗಾಗಿ ಅವರು ನೊಂದಿದ್ದರು.
ಗುರುವಾರ ರಾತ್ರಿ ಕವಿತಾ ಅವರು ತಂದಿದ್ದ ನಾಯಿ ಕೊಠಡಿಯತ್ತ ನೋಡಿ ಬೊಗಳಲು ಆರಂಭಿಸಿತು. ಮನೆಯ ಸದಸ್ಯರು ಕೊಠಡಿಯ ಬಾಗಿಲು ಮುರಿದು ನೋಡಿದಾಗ ಅವರು ಆತ್ಮಹತ್ಯೆ ಮಾಡಿದ ವಿಚಾರ ಪತ್ತೆಯಾಯಿತು. ಜತೆಗೆ ಕುಟುಂಬ ಸದಸ್ಯರ ಬಳಿ ಕ್ಷಮಾಪಣೆ ಕೇಳಿ ಬರೆದ ಪತ್ರವೂ ಸಿಕ್ಕಿದೆ. ಈ ಘಟನೆಯ ಬಳಿಕ ನಾಯಿ ಕೂಡ ಆಹಾರ ಸೇವಿಸುವುದನ್ನು ನಿಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?