ಕಂಠ ಪೂರ್ತಿ ಕುಡಿಸಿ ತನ್ನ ತಂದೆಯನ್ನೇ ಜೀವಂತವಾಗಿ ಸುಟ್ಟು ಹಾಕಿದ ಮಹಿಳೆ. ಕಾರಣವೇನು?
Team Udayavani, Mar 25, 2021, 4:00 PM IST
ನವದೆಹಲಿ: ಊಟಕ್ಕೆಂದು ಹೊರಗಡೆ ಕರೆದೊಯ್ದು, ನಂತರ ಕಂಠ ಪೂರ್ತಿ ಕುಡಿಸುವ ಮೂಲಕ ಸ್ವಂತ ಮಗಳೇ ತನ್ನ ತಂದೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟ ಭೀಕರ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು 22 ವಯಸ್ಸಿನ ಮಹಿಳೆಯೊಬ್ಬಳು ತನ್ನ 56 ವರ್ಷದ ತಂದೆಯನ್ನು ರಾತ್ರಿ ಊಟಕ್ಕೆಂದು ರೆಸ್ಟೋರೆಂಟ್ ಒಂದಕ್ಕೆ ಕರೆದುಕೊಂಡು ಹೋಗಿದ್ದು, ಈ ಸಮಯದಲ್ಲಿ ಆತನಿಗೆ ಮದ್ಯಪಾನ ಮಾಡಿಸಿದ್ದಾಳೆ. ಆ ಬಳಿಕ ತಂದೆಯನ್ನು ರೆಸ್ಟೋರೆಂಟ್ ನಿಂದ ಚಡ್ಪಾಲ್ ಘಾಟ್ ಗೆ ಕರೆದುಕೊಂಡು ಹೋಗಿದ್ದಾಳೆ ಎಂದು ತಿಳಿದ್ದಾರೆ.
ಆ ಬಳಿಕ ಇವರಿಬ್ಬರೂ ಸೇರಿ ಕೂತು ಮಾತುಕತೆ ನಡೆಸಿದ್ದಾರೆ. ನಂತರ ತನ್ನ ತಂದೆ ನಿದ್ರೆಯ ಮಂಪರಿನಲ್ಲಿ ಬೆಂಚೊಂದರ ಮೇಲೆ ಕೂಳಿತಿರುವುದನ್ನು ಗಮನಿಸಿರುವ ಮಹಿಳೆ ಆತನ ಮೇಲೆ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದ್ದಾಳೆ.
ಇದನ್ನೂ ಓದಿ:ಇಂದು ಭಾರತದಲ್ಲಿ ರಿಯಲ್ಮೆ 8, ರಿಯಲ್ಮೆ 8 ಪ್ರೊ ಬಿಡುಗಡೆ : ವಿಶೇಷತೆಗಳೇನು..?
ಘಟನೆಯ ಬಳಿಕ ಮೃತನ ಸಂಬಂಧಿಕರು ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದಾಗ ಮಹಿಳೆಯು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಆದರೆ ಈಕೆ ತನ್ನ ತಂದೆಯನ್ನು ಕೊಲೆ ಮಾಡಿರುವ ಸಂಪೂರ್ಣ ದೃಶ್ಯಾವಳಿಗಳು CCTV ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೀಗಾಗಿ ಮಹಿಳೆ ಪೊಲೀಸರ ಬಲೆಗೆ ಬಿದ್ದಿರುವುದಾಗಿ ವರದಿಯಾಗಿದೆ.
ತನಿಖೆಯ ಸಮಯದಲ್ಲಿ ಘಟನೆಯ ಕುರಿತಾಗಿ ಮಹಿಳೆ ಮಾಹಿತಿ ನೀಡಿದ್ದು, ತಾನು ಚಿಕ್ಕ ವಯಸ್ಸಿನಲ್ಲಿರುವಾಗಲೇ ತನ್ನ ತಾಯಿ ಮೃತಪಟ್ಟಿದ್ದರು. ಆ ಬಳಿಕ ತಂದೆ ನನ್ನ ಮೇಲೆ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದು, ತಾನು ವಿವಾಹವಾಗುವ ವರೆಗೂ ತಂದೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿದ್ದರು. ವಿವಾಹದ ಬಳಿಕ ಸ್ಪಲ್ಪ ಸಮಯದಲ್ಲೇ ನನ್ನ ಪತಿ ಕೂಡಾ ನನ್ನಿಂದ ದೂರಿವಾಗಿದ್ದು, ನಾನು ಮತ್ತೆ ಮರಳಿ ತಂದೆಯ ಮನೆಗೆ ಬರುವಂತಾಯಿತು. ಆ ಬಳಿಕ ತಂದೆ ಮತ್ತೆ ತನಗೆ ಹಿಂಸೆ ನೀಡಲು ಆರಂಭಿಸಿದ್ದ ಹೀಗಾಗಿ ಮಾನಸಿಕವಾಗಿ ನೊಂದು ಹೀಗೆ ಮಾಡಿರುವುದಾಗಿ ತಿಳಿಸಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ