ಭೂ ವಿವಾದ: ಮುತ್ತಜ್ಜಿಯನ್ನು ಗುಂಡಿಟ್ಟು ಕೊಂದ ಮರಿ ಮೊಮ್ಮಗ
Team Udayavani, Feb 16, 2019, 7:06 AM IST
ಮುಜಫರನಗರ : ಭೂ ವಿವಾದಕ್ಕೆ ಸಂಬಂಧಿಸಿ ವೃದ್ಧ ಮಹಿಳೆಯನ್ನು ಆಕೆಯ ಮರಿ ಮೊಮ್ಮಗ ಗುಂಡಿಟ್ಟು ಕೊಂದ ಘಟನೆ ಮುಜಫರನಗರ ಜಿಲ್ಲೆಯ ನಗ್ಲಾ ರಾಹಿ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮರಿ ಮೊಮ್ಮಗ ಉಸ್ಮಾನ್ ತನ್ನ ವೃದ್ದೆ ಮುತ್ತಜ್ಜಿಯನ್ನು ಮನೆಯಲ್ಲೇ ಗುಂಡಿಕ್ಕಿ ಸಾಯಿಸಿದ ಎಂದು ಸರ್ಕಲ್ ಆಫೀಸರ್ ಮೊಹಮ್ಮದ್ ರಿಜ್ವಾನ್ ತಿಳಿಸಿದ್ದಾರೆ.
ಗುಂಡೇಟು ಪಡೆದು ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ರಿಜ್ವಾನ್ ತಿಳಿಸಿದ್ದಾರೆ.