ಕೌಟುಂಬಿಕ ಕಲಹ: 5ಮಕ್ಕಳನ್ನು ಗಂಗಾನದಿಗೆ ಎಸೆದ ಮಹಿಳೆ: ಮಾಟಗಾತಿ ಎಂದು ಪರಾರಿಯಾದ ಮೀನುಗಾರರು
Team Udayavani, Apr 13, 2020, 9:03 AM IST
ಭದೋಯಿ: ಪತಿಯೊಂದಿಗೆ ಕಲಹ ಏರ್ಪಟ್ಟು ಮಹಿಳೆಯೊಬ್ಬರು ತನ್ನ ಐದು ಮಕ್ಕಳನ್ನು ಗಂಗಾ ನದಿಗೆ ಎಸೆದ ಘಟನೆ ಉತ್ತರಪ್ರದೇಶ ಭದೋಯಿ ಜೆಲ್ಲೆಯಲ್ಲಿ ನಡೆದಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಮಕ್ಕಳನ್ನು ರಕ್ಷಣೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದ್ದು ಇಲ್ಲಿಯವರೆಗೂ ಪತ್ತೆಯಾಗಿಲ್ಲ, ಮಿರ್ದುಲ್ ಯಾದವ್ ಮತ್ತು ಆತನ ಪತ್ನಿ ಮಂಜು ಯಾದವ್ ನಡುವೆ ಕಳೆದ ಒಂದು ವರ್ಷದಿಂದ ಕೌಟುಂಬಿಕ ವಿಚಾರಕ್ಕೆ ಆಗಿಂದಾಗ್ಗೆ ಜಗಳವಾಡುತ್ತಿದ್ದರು. ಎಂದು ಹಿರಿಯ ಪೊಲೀಸ್ ಅಧೀಕಾರಿ ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.
ಶನಿವಾರ ಸಂಜೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಮಂಜು ಯಾದವ್ ತನ್ನ ಐವರು ಮಕ್ಕಳನ್ನು ಗಂಗಾ ನದಿಗೆ ತಳ್ಳಿ ಹತ್ಯೆ ಮಾಡುವ ಯೋಜನೆ ರೂಪಿಸಿದ್ದಳು. ಅದರಂತೆ ರಾತ್ರಿಯ ವೇಳೆಗೆ ಐವರು ಮಕ್ಕಳನ್ನು ಕರೆದುಕೊಂಡು ಹೋಗಿ ಗಂಗಾ ನದಿಯಲ್ಲಿ ಎಸೆದಿದ್ದಾಳೆ. ಹಿನ್ನಿರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೆಲವು ಮೀನುಗಾರರು ಕತ್ತಲೆಯಲ್ಲಿ ಮಹಿಳೆ ಮತ್ತು ಮಕ್ಕಳು ಕೂಗಾಡುವ ಸದ್ದನ್ನು ಕೇಳಿಸಿಕೊಂಡಿದ್ದಾರೆ. ಆದರೇ ಮಾಟಗಾತಿ ಎಂದು ತಿಳಿದು ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳನ್ನು ಗಂಗಾನದಿಗೆ ಎಸೆದ ನಂತರವೂ ಮಂಜು ಯಾದವ್ ಅಲ್ಲೆ ಉಳಿದುಕೊಂಡಿದ್ದು ಭಾನುವಾರ ಮುಂಜಾನೆ ಗ್ರಾಮಸ್ಥರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾಳೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ