ಉತ್ತರ ಪ್ರದೇಶ : ಪತಿಯ ಕೊಂದ ಪತ್ನಿಯ ಪ್ರಿಯಕರ ಅರೆಸ್ಟ್
Team Udayavani, Dec 18, 2018, 4:35 PM IST
ಮುಜಫರನಗರ, ಉತ್ತರ ಪ್ರದೇಶ : ಆರು ತಿಂಗಳ ಹಿಂದೆ ಪತಿಯನ್ನು ಕೊಂದ ಪತ್ನಿಯ ಪ್ರಿಯಕರನನ್ನು ಪೊಲೀಸರು ಶಾಮ್ಲಿ ಜಿಲ್ಲೆಯಲ್ಲಿ ಬಂಧಿಸಿರುವುದು ವರದಿಯಾಗಿದೆ.
ಈ ವರ್ಷ ಜೂನ್ ನಲ್ಲಿ ಕೊಲೆ ಆರೋಪಿ ಪ್ರದೀಪ್, ಧರ್ಮವೀರ್ ಸಿಂಗ್ ನನ್ನು ಆತನ ಪತ್ನಿಯ ಜತೆ ಸೇರಿ ಕತ್ತು ಹಿಸುಕಿ ಕೊಂದು ಬಳಿಕ ಆತನ ಶವವನ್ನು ಸೀಲಿಂಗ್ ಫ್ಯಾನಿಗೆ ನೇತು ಹಾಕಿ ಆತ್ಮಹತ್ಯೆ ಪ್ರಕರಣವೆಂದು ಬಿಂಬಿಸಲು ಯತ್ನಿಸಿದ್ದ.
ತನ್ನ ಪತ್ನಿ ಮತ್ತು ಪ್ರದೀಪ್ ನಡುವಿನ ಅನೈತಿಕ ಸಂಬಂಧವನ್ನು ಧರಮ್ವೀರ್ ಸಿಂಗ್ ತೀವ್ರವಾಗಿ ಆಕ್ಷೇಪಿಸಿದ್ದ. ಅದಕ್ಕಾಗಿ ಆತನನ್ನು ಕೊಂದು ಮುಗಿಸುವ ಸಂಚನ್ನು ಆರೋಪಿ ಪ್ರದೀಪ್ ಮತ್ತು ಧರಮ್ವೀರ್ನ ಪತ್ನಿ ಕಾರ್ಯಗತಗೊಳಿಸಿದ್ದರು ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಪೊಲೀಸರು ಆರೋಪಿ ಪ್ರದೀಪ್ ನನ್ನು ಗರೀ ಪುಕ್ತಾ ವ್ಯಾಪ್ತಿಗೆ ಒಳಪಟ್ಟ ಮಲೈಂದಿ ಗ್ರಾಮದಲ್ಲಿ ಸೆರೆ ಹಿಡಿದರು. ಆತನ ಪ್ರಿಯತಮೆಯಾಗಿರುವ ಮೃತ ಧರಮ್ವೀರ್ ನ ಪತ್ನಿ ಇನ್ನೂ ತಲೆಮರೆಸಿಕೊಂಡಿದ್ದಾಳೆ. ಪೊಲೀಸರು ಆಕೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…