ಅಮರಾವತಿಗೆ ಸಾಲ ಇಲ್ಲ: ವಿಶ್ವಬ್ಯಾಂಕ್
Team Udayavani, Jul 20, 2019, 5:18 AM IST
ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ 2,000 ಕೋಟಿ ರೂ. ಸಾಲ ನೀಡಬೇಕಿದ್ದ ವಿಶ್ವಬ್ಯಾಂಕ್, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅಮರಾವತಿ ನಿರ್ಮಾಣಕ್ಕೆ ಸಾಲ ನೀಡುವಂತೆ ಭಾರತ ಸರ್ಕಾರ ತಾನು ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ಹಿಂಪಡೆದಿರುವುದರಿಂದ ನಿರ್ಧಾರ ಬದಲಿಸಲಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಕಾರಣವೇನು?: ಮೂಲಗಳ ಪ್ರಕಾರ, ಈ ಹಿಂದೆ ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ಸರ್ಕಾರ, ಅಮರಾವತಿ ನಿರ್ಮಾಣಕ್ಕಾಗಿ ಜಮೀನು ಕೊಡಲೊಪ್ಪದ ರೈತರನ್ನು ಬೆದರಿಸಿ ಅಕ್ರಮವಾಗಿ ಅವುಗಳನ್ನು ಪಡೆದಿದೆ ಎಂಬ ದೂರುಗಳು ಕೇಳಿಬಂದಿದ್ದವು. ಹಾಗಾಗಿ, ದೂರುಗಳ ತನಿಖೆಗೆ ವಿಶ್ವಬ್ಯಾಂಕ್ ಮುಂದಾಗಿತ್ತು. ಅದು ಕೇಂದ್ರ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಹಾಗಾಗಿ, ಅದು ಮನವಿಯನ್ನು ಹಿಂಪಡೆದಿದೆ ಎನ್ನಲಾಗಿದೆ.
ವಾಕ್ಸಮರ: ವಿಶ್ವಬ್ಯಾಂಕ್ನ ಹೊಸ ನಿರ್ಧಾರ, ಆಂಧ್ರದ ವಿಪಕ್ಷ ಟಿಡಿಪಿ ಹಾಗೂ ವೈಎಸ್ಆರ್ಸಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ವಿಶ್ವಬ್ಯಾಂಕ್ ಮನವೊಲಿಸುವಲ್ಲಿ ವೈಎಸ್ಆರ್ಸಿ ವಿಫಲವಾಗಿದೆ ಎಂದು ಟಿಡಿಪಿ ದೂರಿದ್ದರೆ, ಈ ಎಲ್ಲಾ ವಿದ್ಯಮಾನಗಳಿಗೆ ನಾಯ್ಡು ಕಾರಣ ಎಂದು ಟಿಡಿಪಿ ವಿರುದ್ಧ ಸರ್ಕಾರ ಹರಿಹಾಯ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ